ಶಿಶಿಲರ ಐದು ಕೃತಿಗಳ ಪ್ರಕಟಣೆ

0


ಹಿರಿಯ ಸಾಹಿತಿ, ವಿದ್ವಾಂಸ ಡಾ. ಪ್ರಭಾಕರ ಶಿಶಿಲರ ಐದು ಸಾಹಿತ್ಯ ಕೃತಿಗಳು ಶೀಘ್ರದಲ್ಲಿ ಪ್ರಕಟವಾಗಲಿದೆ. ಶ್ರೀಯುತರ ಪ್ರಥಮ ಕೃತಿ ಬಡ್ಡಡ್ಕ ಅಪ್ಪಯ್ಯ ಗೌಡರ ಬೇಟೆಯ ಅನುಬವಗಳ ಶಿಕಾರಿಯ ಸೀಳು ನೋಟ ಇದರ ನಾಲ್ಕನೇ ಆವೃತ್ತಿಯನ್ನು ಬಡ್ಡಡ್ಕದ ಅನಂತವೇದ ಪ್ರಕಾಶನ ಹೊರತರುತ್ತಿದೆ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಆತ್ಮಕತೆ ಭೊಗಸೆ ತುಂಬಾ ಕನಸಿನ ಎರಡನೇ ಆವೃತ್ತಿಯನ್ನು ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಟಿಸುತ್ತಿದೆ. ಇದೇ ಸಂಸ್ಥೆ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಸಂಪಾದಿಸಿದ ಶಿಶಿಲರ ಹದಿನೆಂಟು ವಿಶಿಷ್ಟ ಕತೆಗಳ ಸಂಕಲನವನ್ನು ಹೊರತರುತ್ತಿದೆ.


ನೂತನ ಹತ್ತು ಕತೆಗಳ ಸಂಕಲನ ಕಲ್ಲುರ್ಟಿಯ ಕುಕ್ಕುಟ ಕತನ ಮತ್ತು ಮಹಾಭಾರತ ಆಧಾರಿತ ಕಾದಂಬರಿ ಕುಂತಿಯನ್ನು ಮೈಸೂರಿನ ರಾಜ್ ಪ್ರಕಾಶನ ಪ್ರಕಾಶಿಸುತ್ತಿದೆ. ಈ ಎಲ್ಲಾ ಕೃತಿಗಳು ನವೆಂಬರ್ ೨೦೨೪ರಲ್ಲಿ ಲೋಕರ್ಪಣೆಗೊಳ್ಳಲಿವೆ ಎಂದು ಅಧಿಕೃತವಾಗಿ ತಿಳಿದುಬಂದಿದೆ.