ಪೆರಾಜೆ: ರಸ್ತೆಯಲ್ಲಿ ಸಿಕ್ಕ ಪರ್ಸ್‌ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

0

ರಸ್ತೆಯಲ್ಲಿ ಸಿಕ್ಕಿದ ನಗದು ಹಾಗೂ ದಾಕಲೆಪತ್ರಗಳುಳ್ಳ ಪರ್ಸನ್ನು ಮರಳಿ ವಾರಸುದಾರರಿಗೆ ಒಪ್ಪಿಸುವ ಮೂಲಕ ಪೆರಾಜೆಯ ಶ್ರೀ ಭಗವತಿ ಆಟೋ ಚಾಲಕ ಹರ್ಷಿತ್(ರಜತ್) ಮಜಿಕೋಡಿ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಅಟೋರಿಕ್ಷಾ ಚಾಲಕ ಹರ್ಷಿತ್ ಅವರು ಸುಳ್ಯದಿಂದ ಪೆರಾಜೆಗೆ ತಮ್ಮ ಆಟೋದಲ್ಲಿ ಬರುವ ವೇಳೆ ಸುಳ್ಯದ ಪರಿವಾರಕಾನದ ಉಡುಪಿ ಗಾರ್ಡನ್ ಹೋಟೆಲ್ ಸಮೀಪ ರೂ. 7,500 ನಗದು ಹಾಗೂ ದಾಖಲೆಪತ್ರಗಳುಳ್ಳ ಪರ್ಸ್ ಹರ್ಷಿತ್ ಅವರಿಗೆ ಸಿಕ್ಕಿತ್ತು.

ಹರ್ಷಿತ್ ಅವರು ಕೂಡಲೆ ಪರ್ಸ್ ನಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿ, ಸುಳ್ಯದ ಮಹಾವಿಷ್ಣು ಗ್ಯಾರೇಜ್‌ನ ಜಯಂತ ಅವರಿಗೆ ಪೋನ್ ಮೂಲಕ ಸಂಪರ್ಕಿಸಿ ಕಳೆದುಕೊಂಡ ವ್ಯಕ್ತಿಯ ಮಾಹಿತಿಯನ್ನು ಪಡೆದುಕೊಂಡರೆನ್ನಲಾಗಿದೆ.

ಪರ್ಸ್ ಕಳೆದುಕೊಂಡ ವ್ಯಕ್ತಿ ಉಬರಡ್ಕ ಮಿತ್ತೂರು ನಿವಾಸಿ ಟಾಟಾ.ಎ.ಸಿ. ವಾಹನ ಚಾಲಕ ಪದ್ಮನಾಭ ನೀರಬಿದಿರೆ ಎಂದು ತಿಳಿದು ಬಂದಿದ್ದು, ಬಳಿಕ ಅವರನ್ನು ಪೆರಾಜೆ ಜಂಕ್ಷನ್ ಗೆ ಬರಮಾಡಿಕೊಂಡು ಪರ್ಸ ಹಾಗೂ ಅಮೂಲ್ಯ ದಾಖಲೆಗಳನ್ನು
ವಾರಸುದಾರರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮರೆದಿದ್ದಾರೆ.

ಪೆರಾಜೆ ಆಟೋ ಚಾಲಕ ಹರ್ಷಿತ್ ಮಜಿಕೋಡಿ ಅವರ ಕಾರ್ಯಕ್ಕೆ ಪರ್ಸ ಮಾಲೀಕ ಪದ್ಮನಾಭರು ಕೃತಜ್ಞತೆ ಸಲ್ಲಿಸಿದ್ದು, ಶ್ಲಾಘನೆಗೆ ಪಾತ್ರವಾಗಿದೆ.