ಸುಳ್ಯ ವೆಲ್ಫೇರ್ ಅಶೋಶಿಯೇಷನ್ ಬಹರೈನ್ ಸಮಿತಿಯ ವತಿಯಿಂದ ಮೀಲಾದ್ ಸಂಗಮ ಹಾಗೂ ದುವಾ ಮಜ್ಲಿಸ್

0

ಬಹರೈನ್ ಮನಾಮ
ಲೋಕ ಪ್ರವಾದಿ‌ ಮಹಮ್ಮದ್ ನಬಿ ರವರ ಜನ್ಮ ದಿನಾಚರಣೆಯ ಅಂಗವಾಗಿ ಸುಳ್ಯ ವೆಲ್ಫೇರ್ ಅಸೋಷಿಯೇಶನ್ ಬಹರೈನ್ ಸಮಿತಿಯ ವತಿಯಿಂದ ಮೀಲಾದ್ ಸಂಗಮ ಹಾಗೂ ದುವಾ ಮಜ್ಲಿಸ್ ಕಾರ್ಯಕ್ರಮ ಬಹರೈನ್ ನ ರಾಸುರ್ಮಾನ್ ಡಿ.ಕೆ.ಎಸ್ಸಿ ಸೆಂಟರ್ ನಲ್ಲಿ ನಡೆಯಿತು.
ಅಸ್ಸಯ್ಯಿದ್ ಫಕ್ರುದ್ದೀನ್ ತಂಙಳ್ ರವರು ದುವಾಶಿರ್ವಚನ ದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ
“ಮಹಮ್ಮದ್ ನಬಿಯವವರ ಜೀವನ ಚರ್ಯೆವನ್ನು ಪಾಲಿಸಿದರೆ ಮಾತ್ರ ಪರಲೋಕ ಯಶಸ್ಸುಗಳಿಸಲು ಸಾಧ್ಯ” ಎಂದು ಸಯ್ಯಿದ್ ರವರು ಹೇಳಿದರು.
ಅಬ್ದುಲ್ ಹಫೀಝ್ ಫಾಳಿಲಿ ಉಸ್ತಾದರವರ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ಹಾಗೂ ಖುರ್ರತುಸ್ಸಾದಾತ್ ಅನುಸ್ಮರಣೆ ನಡೆಯುತು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಸುಳ್ಯ ವೆಲ್ಫೇರ್ ಅಸೋಸಿಯೇಷನ್ ಸಮಿತಿಯ ಮಾಜಿ ಅಧ್ಯಕ್ಷರಾದ ದಿ|ಬಶೀರ್ ಕಾರ್ಲೆ ಮತ್ತು ಕಾರ್ಯಕರ್ತರಾದ ರಶೀದ್ ತ್ರಿಶೂರ್, ಖಾರಿಹ್ ಉಸ್ತಾದ್ ರವರ ಅನುಸ್ಮರಣೆ ಹಾಗೂ ತಹಲೀಲ್ ದುವಾ ಮಜ್ಲಿಸ್ ನಡೆಯಿತು.

ಕಾರ್ಯಕ್ರಮದಲ್ಲಿ ಹಾಫಿಲ್ ಅಜ್ವದ್ ಅಲವಿ ಕಿರಾಅತ್ ಪಠಿಸಿದರು.
ಸುಳ್ಯ ವೆಲ್ಪೆರ್ ಅಸೋಸಿಯೇಷನ್ ಅಧ್ಯಕ್ಷರಾದ ಸಿದ್ದೀಕ್ ಸುಳ್ಯ ಅಧ್ಯಕ್ಷತೆ ವಹಿಸಿದ್ದರು.
ಸೂಫಿ ಪೈಂಬಚ್ಚಾಲ್ ಸ್ವಾಗತಿಸಿ ಶುಭ ಹಾರೈಸಿದರು.

DKSC ಸೆಂಟ್ರಲ್ ಕಮಿಟಿ ವರ್ಕಿಂಗ್ ಅಧ್ಯಕ್ಷರಾದ ಮುಹಮ್ಮದ್ ಸೀದಿ ಹಾಜಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು

ಮಜೀದ್ ಸಅಧಿ ಉಸ್ತಾದರು ಅನುಸ್ಮರಣ ಪ್ರಭಾಷಣ ಮಾಡಿದರು.

ವೇದಿಕೆಯಲ್ಲಿ ಸಮಿತಿಯ ಅಬ್ದುಲ್ಲ ಅಲವಿ ಹಾಜಿ, ಫಕ್ರುದ್ದೀನ್ ಹಾಜಿ, ಕೋಶಾಧಿಕಾರಿ ರಿಯಾಜ್ ಸುಳ್ಯ ಮತ್ತು ಡಿಕೆಎಸ್ಸಿ,ಕೆಸಿಎಫ್,ಬಿಕೆಎಸ್ಜೆ , ದಾರುಲ್ ಹುದಾ ನೇತಾರರು ಹಾಗೂ ಝಕರಿಯಾ ಸಖಾಫಿ ಉಸ್ತಾದರು ಉಪಸ್ಥಿತರಿದ್ದರು.

ಡಿಕೆಎಸ್ ಸಿ ಅಧ್ಯಕ್ಷರಾದ ಮಜೀದ್ ಸಅಧಿ ಉಸ್ತಾದರು ಕೊನೆಯಲ್ಲಿ ಪಾರ್ಥಿಸಿದರು.

ಕೆಸಿಎಫ್, ಡಿಕೆಎಸ್ಸಿ , ಕೊಡಗು, ದಾರುಲ್ ಹುದ ಸಮಿತಿ, ನಾಯಕರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಿದ್ದೀಕ್ ಎಣ್ಮೂರು ಧನ್ಯವಾದ ಸಮರ್ಪಣೆ ಮಾಡಿದರು.