ಉಪನ್ಯಾಸಕಿ, ವಾಗ್ಮಿ ಬೇಬಿ ವಿದ್ಯಾ ಪಿ.ಬಿ ಯವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

0

ದ.ಕ. ಜಿಲ್ಲಾ ಪ.ಪೂ ಕಾಲೇಜುಗಳ ಪ್ರಾಚರ‍್ಯರ ಸಂಘ(ರಿ )ಮಂಗಳೂರು, ವಿವಿಧ ವಿಷಯವಾರು ಉಪನ್ಯಾಸಕರ ಸಂಘ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಹಾಗೂ ಆಳ್ವಾಸ್ ಪ.ಪೂ. ಕಾಲೇಜು, ಮೂಡಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಕಾಲೇಜು ಮೂಡಬಿದಿರೆ ಇಲ್ಲಿ ಸೆ. 22ರಂದು ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ -2024 ಈ ಕಾರ್ಯಕ್ರಮದಲ್ಲಿ “ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿ ಹಂತದಿಂದಲೇ ಬಹುಮುಖ ಪ್ರತಿಭಾವಂತೆಯಾಗಿ, ರ್ಯಾoಕ್ ವಿಜೇತ ವಿದ್ಯಾರ್ಥಿನಿಯಾಗಿ, ವೃತ್ತಿ ಕ್ಷೇತ್ರದಲ್ಲಿ ಕ್ರಿಯಾಶೀಲ ಉಪನ್ಯಾಸಕಿಯಾಗಿ ಅತ್ಯುತ್ತಮ ಪಾಠ ಬೋಧನೆ, ಪಾರದರ್ಶಕ ಸೇವೆ, ಶಿಸ್ತುಬದ್ಧ, ಪ್ರಾಮಾಣಿಕ ನಡೆ-ನುಡಿಗೆ ಹೆಸರಾದ ಬೇಬಿ ವಿದ್ಯಾರವರು, ವಿದ್ಯಾರ್ಥಿಗಳ ಸಮಗ್ರ ವಿಕಸನದ ಗುರಿ ಹೊಂದಿ ಮಾರ್ಗದರ್ಶನ ನೀಡುತ್ತಾ ಸಾಧನೆಗೆ ಪ್ರೆರೇಪಿಸುತ್ತಾ ಬಂದವರು.

ಸಂಸ್ಥೆಗಳ ಶ್ರೇಯಕ್ಕಾಗಿ ಕಾರ್ಯ ದಕ್ಷತೆಯಿಂದ ಸೇವೆ ಸಲ್ಲಿಸುತ್ತಾ, ಸೇವೆಯಲ್ಲಿ ವಿಸ್ತರಿಸಿಕೊಂಡು ಮಾದರಿ ಉಪನ್ಯಾಸಕಿಯಾಗಿ ಗುರುತಿಸಿಕೊಂಡವರು. ವಿಷಯಾಧಾರಿತ ತನ್ನ ಕನ್ನಡ ವಾಕ್ ಶೈಲಿಯಿಂದ ಪ್ರಸಿದ್ಧಿ ಹೊಂದಿರುವ ಇವರು ವಾಗ್ಮಿಯಾಗಿ ಸರಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳ ಜನಪ್ರಿಯ ನಿರೂಪಕಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಮಾಧ್ಯಮಗಳ ನೇರ ಪ್ರಸಾರ ಕಾರ್ಯಕ್ರಮ ಹಾಗೂ ಸಾಕ್ಷ್ಯ ಚಿತ್ರಗಳಿಗೆ ಹಿನ್ನಲೆ ಧ್ವನಿಯಾಗಿ ಹೀಗೆ ಹತ್ತು ಹಲವು ಪ್ರತಿಭಾ ಶಕ್ತಿಯ ಮೂಲಕ ಜನಮಾನಸದಲ್ಲಿ ಚಿರ ಪರಿಚಿತರಾಗಿದ್ದಾರೆ. ಕನ್ನಡ ಭಾಷೆ, ಸಾಹಿತ್ಯದ ಕುರಿತು ಅಪಾರ ಅಭಿಮಾನ ಹೊಂದಿ ಕನ್ನಡ ಸೇವೆ,ಸಮಾಜಮುಖೀ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರು.

ಇತ್ತೀಚಿಗೆ ಸುಳ್ಯ ರೋಟರಿ ಕ್ಲಬ್ ನವರು ನೇಶನ್ ಬಿಲ್ಡರ್ ಅವಾರ್ಡ್ ಇವರಿಗೆ ನೀಡಿದ್ದರು. ಮೂಲತ ಅರಂತೋಡು ಗ್ರಾಮದ ಪೂಜಾರಿಮನೆಯವರಾದ ಪ್ರಸ್ತುತ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ವಾಸ್ತವ್ಯ ಹೊಂದಿರುವ ನಿವೃತ್ತ ಅಧ್ಯಾಪಕ ದಂಪತಿ ಬೆಳ್ಯಪ್ಪ ಗೌಡ ಪಿ, ಭಾಗೀರಥಿ ಕೆ ಇವರ ಪುತ್ರಿ.