ಓಮ್ನಿ ಕಾರಲ್ಲಿ ಪತ್ತೆಯಾದ ಶವದ ಗುರುತು ಪತ್ತೆ

0

ಕಲ್ಲುಮುಟ್ಲು ನಿವಾಸಿ ಮನೋಹರ್ ಸತ್ತದ್ದಾದರೂ ಹೇಗೆ ?


ಸುಳ್ಯ ಪರಿವಾರಕಾನದಲ್ಲಿ ಕಲ್ಲುಮುಟ್ಲು ಕಡೆಗೆ ಹೋಗುವ ರಸ್ತೆ ಬದಿ ನಿಲ್ಲಿಸಲ್ಪಟ್ಟಿದ್ದ ಓಮ್ನಿ ಕಾರಿನಲ್ಲಿ ಇಂದು ಸಂಜೆ ಪತ್ತೆಯಾದ ಕೊಳೆತ ಸ್ಥಿತಿಯಲ್ಲಿದ್ದ ಶವ ಯಾರದೆಂಬ ಗುರುತು ಪತ್ತೆಯಾಗಿದೆ.
ಮೃತಪಟ್ಟ ಯುವಕ ಕಲ್ಲುಮುಟ್ಲು ನಿವಾಸಿ ಮನೋಹರ್ ಎಂದು ಗುರುತಿಸಲಾಗಿದೆ.

ಈತ ಸುಳ್ಯ ಕಲ್ಲು ಮುಟ್ಲು ನಿವಾಸಿಯಾಗಿದ್ದು, ಪತ್ನಿ ಮತ್ತು ಮಕ್ಕಳು ಇದ್ದಾರೆ.
ಮದ್ಯ ವ್ಯಸನಿಯಾಗಿದ್ದ ಹಿನ್ನಲೆಯಲ್ಲಿ ಮನೆಗೆ ಹೆಚ್ಚಾಗಿ ಹೋಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಆದ್ದರಿಂದ ಆತ ಓಮ್ನಿಯೊಳಗೆ ಮೃತಪಟ್ಟು ಮೂರ್ನಾಲ್ಕು ದಿನವಾಗಿದ್ದರೂ ಮನೆಯವರು ಹುಡುಕಲಾಗಲೀ, ಪೋಲೀಸ್ ದೂರು ನಿಡಲಾಗಲೀ ಹೋಗಿರಲಿಲ್ಲ.
ಆದರೆ ಆತ ಸಾವನ್ನಪ್ಪಿದ ರೀತಿಯಾಗಲೀ, ಸಾವಿಗೆ ಕಾರಣವೇನೆಂಬುದಾಗಲೀ ಗೊತ್ತಾಗಿಲ್ಲ.
ಪೊಲೀಸರು ತನಿಖೆ ನಡೆಸುತ್ತಿದ್ದಾರೆ.