ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

140 ಕೋಟಿ ವ್ಯವಹಾರ, 45 ಲಕ್ಷ ಲಾಭ

ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗಿರಿಯವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ಸೆ. 23ರಂದು ನಡೆಯಿತು.
ಸದಸ್ಯರ ಉತ್ತಮ ಪ್ರೋತ್ಸಾಹದೊಂದಿಗೆ ಕಳೆದ ಸಾಲಿನಲ್ಲಿ ಸಂಘವು 140 ಕೋಟಿ 10 ಲಕ್ಷ 18 ಸಾವಿರದ 256 ರೂಪಾಯಿ 82 ಪೈಸೆ ವ್ಯವಹಾರ ಮಾಡಿ 45ಲಕ್ಷದ 16 ಸಾವಿರದ 404 ರೂಪಾಯಿ 13 ಪೈಸೆ ಲಾಭ ಗಳಿಸಿದೆ.ಇನ್ನು ಸದಸ್ಯರ ಪ್ರೋತ್ಸಾಹ ಅಗತ್ಯ ಇದೆ ಎಂದು ಅಧ್ಯಕ್ಷರು ಹೇಳಿದರು.

ಉಪಾಧ್ಯಕ್ಷ ಪದ್ಮಯ್ಯ ನಾಯ್ಕ್ ಮುಳಿಯ, ನಿರ್ದೇಶಕರಾದ ಗಿರೀಶ್ ನಡುಬೈಲು, ಕಮಲಾಕ್ಷ ಹೊಳೆಕೆರೆ, ಅವಿನಾಶ್ ದೇವರಮಜಲು, ತ್ಯಾಗರಾಜ್ ಹೊಸಮನೆ, ಶ್ರೀಮತಿ ಶುಭದಾ ಎಸ್ ರೈ, ಶ್ರೀಮತಿ ಸುಮಾ ನೂಚಿಲ, ರಾಘವ ಪೂಜಾರಿ ಜಾಲ್ತಾರ್, ಪುರಂದರ ರೈ ಬಲ್ಕಾಡಿ, ಕಾಂತು ದೇವಸ್ಯ, ಲಕ್ಷ್ಮಿ ನಾರಾಯಣ ಜಾಲ್ತಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಳೆದ ಸಾಲಿನಲ್ಲಿ ನಿಧನ ಹೊಂದಿದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಬರುವ ವರ್ಷ ಬೆಳ್ಳಿಹಬ್ಬ ಆಚರಿಸುವ ಬಗ್ಗೆ ಪ್ರಸ್ತಾಪಿಸಲಾಯಿತು. ಸದಸ್ಯರ ಸಲಹೆಯದಂತೆ ಕಟ್ಟಡ ದುರಸ್ಥಿಮಾಡಿ ಸಾಂಕೇತಿಕವಾಗಿ ಬೆಳ್ಳಿ ಹಬ್ಬ ಆಚರಿಸುವುದೆಂದು ನಿರ್ಣಯ ಮಾಡಲಾಯಿತು. ಸಂಘದ ಕಾರ್ಯನಿರ್ವಹಣಾಧಿಕಾರಿ ರಮೇಶ್ ದೋಳ್ತಿಲ ಸಭೆಯ ನಡವಳಿ ನಡೆಸಿ ವರದಿ ವಾಚಿಸಿದರು, ವಿಜಯ ರಾಮಣ್ಣ ಖಂಡಿಗ ಪ್ರಾರ್ಥಿಸಿದರು ನಿರ್ದೇಶಕ ಗಿರೀಶ್ ನಡುಬೈಲ್ ಸ್ವಾಗತಿಸಿದರು. ಹಿರಿಯ ಗುಮಾಸ್ತ ನವೀನ್ ಕುಮಾರ್ ಕೆ.ಎಸ್ .,ಕಿರಿಯ ಗುಮಾಸ್ತ ಕುಂಞ್ಞಣ್ಣ ಎ, ಗುಮಾಸ್ತ ಅಶ್ವತ್ ಜೆ, ಹಾಗೂ ಸದಸ್ಯರು, ಪಿಗ್ಮಿ ಸಂಗ್ರಹಗಾರ ಸೀತಾರಾಮ ಡಿ, ನವೋದಯ ಪ್ರೇರಕರಾದ ಶ್ರೀಮತಿ ಲಕ್ಷ್ಮಿಸಹಕರಿಸಿದರು. ನಿರ್ದೇಶಕ ಅವಿನಾಶ್ ದೇವರ ಮಜಲು ವಂದಿಸಿದರು.
(ಚಿತ್ರ ವರದಿ :ಸಂಕಪ್ಪ ಸಾಲಿಯಾನ್)