ಪಡ್ಪಿನಂಗಡಿ :ಪೋಷಣ್ ಅಭಿಯಾನ ಮತ್ತು ಅನ್ನ ಪ್ರಾಷಣ ಹಾಗೂ ಪೌಷ್ಟಿಕ ಆಹಾರ ಪ್ರದರ್ಶನ ಕಾರ್ಯಕ್ರಮ

0

ಸಪ್ತಶ್ರೀ ಸ್ತ್ರೀ ಶಕ್ತಿ ಗೊಂಚಲು ಸಮಿತಿ ಕಲ್ಮಡ್ಕ ಪಂಬೆತ್ತಾಡಿ ಹಾಗೂ ಪ್ರಕೃತಿ ಯುವತಿ ಮಂಡಲ ಪಡ್ಪಿನಂಗಡಿ ಇದರ ಜಂಟಿ ಆಶ್ರಯದಲ್ಲಿ ಪೋಷಣ್ ಅಭಿಯಾನ ಮತ್ತು ಅನ್ನ ಪ್ರಾಷಣ ಹಾಗೂ ಪೌಷ್ಟಿಕ ಆಹಾರ ಪ್ರದರ್ಶನ ಕಾರ್ಯಕ್ರಮ ಪಡ್ಪಿನಂಗಡಿ ನಡ್ಕ ಶಿವಗೌರಿ ಕಲಾ ಮಂದಿರದಲ್ಲಿ ನಡೆಯಿತು ಕಾರ್ಯಕ್ರಮವನ್ನು ಪಂಜ ಲಯನ್ಸ್ ಕ್ಲಬ್ ಕೋಶಾಧಿಕಾರಿ ಸುರೇಶ್ ಕುಮಾರ್ ನಡ್ಕ ಉದ್ಘಾಟಿಸಿದರು.

ಪಂಜ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ.ಮಂಜುನಾಥ ಇವರು ಆರೋಗ್ಯ ಮಾಹಿತಿ ನೀಡಿದರು. ಗೊಂಚಲು ಸಮಿತಿ ಅಧ್ಯಕ್ಷೆ ಶ್ರೀಮತಿ ಭವಾನಿ ಆಕ್ರಿಕಟ್ಟೆ ಇವರು ಸಭಾಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ರವಿಶ್ರೀ,ನಿವೃತ ಮುಖ್ಯ ಶಿಕ್ಷಕಿ ಶ್ರೀಮತಿ ಕಮಲ ನಡ್ಕ,,ಪಡ್ಪಿನಂಗಡಿ ಅಂಗನವಾಡಿ ಕೇಂದ್ರದ ಇತ್ತೀಚೆಗೆ ನಿವೃತಿ ಗೊಂಡ ಕಾರ್ಯಕರ್ತೆ ಶ್ರೀಮತಿ ಲೀಲಾವತಿ ಖಂಡಿಗೆ, ಹಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ರಾಹೇಲಮ್ಮ ,,ಪ್ರಕೃತಿ ಯುವತಿ ಮಂಡಲ ಇದರ ಉಪಾಧ್ಯಕ್ಷೆ ಶ್ರೀಮತಿ ಲತಾ ಆಳಕೆ, ಗೊಂಚಲು ಸಮಿತಿ ಕಾರ್ಯದರ್ಶಿ ಶ್ರೀಮತಿ ಮಮತಾ ಕಾಪಡ್ಕ ಉಪಸ್ಥಿತರಿದ್ದರು .ಈ ವೇಳೆ ನಿವೃತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲೀಲಾವತಿ ಖಂಡಿಗೆ ರವರನ್ನು ಗೊಂಚಲು ಸಮಿತಿ ಹಾಗೂ ಪ್ರಕೃತಿ ಯುವತಿ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ರೂಪ ಸಾಯಿ ನಾರಾಯಣ ವೇದಿಕೆಗೆ ಆಹ್ವಾನಿಸಿದರು.ಶ್ರೀಮತಿ ಕಮಲಾ ನಡ್ಕ ಸ್ವಾಗತಿಸಿದರು. ಶ್ರೀಮತಿ ರವಿಶ್ರೀ ಪ್ರಾಸ್ಥಾವಿಕ ಗೈದರು. ಶ್ರೀಮತಿ ಮಮತಾ ನಡ್ಕ ಸನ್ಮಾನಿತರ ಪರಿಚಯಿಸಿದರು. ಶ್ರೀಮತಿ ಮಮತಾ ಕಾಪಡ್ಕ ವಂದಿಸಿದರು. ಶ್ರೀಮತಿ ಧನ್ಯ ಆಕ್ರಿಕಟ್ಟೆ ನಿರೂಪಿಸಿದರು.