ನಡುಗಲ್ಲು: ಜವಾಹರ್‌ ಯುವಕ ಮಂಡಲ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಕುಶನ್‌, ಕಾರ್ಯದರ್ಶಿಯಾಗಿ ಯನಿತ್‌ ಪಡ್ರೆ

ನಡುಗಲ್ಲಿನ ಜವಾಹರ್‌ ಯುವಕ ಮಂಡಲ ಇದರ ವಾರ್ಷಿಕ ಮಹಾಸಭೆಯು ನಡುಗಲ್ಲು ಶಾಲಾ ವಠಾರದಲ್ಲಿ ನಡೆಯಿತು. ಸಭೆಯಲ್ಲಿ ಹೊಸ ಪದಾಧಿಕಾರಿಗಳು ಆಯ್ಕೆ ಮಾಡಲಾಗಿದ್ದು ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಕುಶನ್‌ ನಡುಗಲ್ಲು ಹಾಗೂ ಕಾರ್ಯದರ್ಶಿಯಾಗಿ ಯನಿತ್‌ ಕುಮಾರ್‌ ಪಡ್ರೆ ಆಯ್ಕೆಯಾದರು.
ಅಲ್ಲದೇ, ವಿವಿಧ ಪದಾಧಿಕಾರಿಗಳನ್ನು ನೇಮಿಸಲಾಗಿದ್ದು ಗೌರವಾಧ್ಯಕ್ಷರಾಗಿ ಪ್ರಶಾಂತ್‌ ಅಂಬೆಕಲ್ಲು, ಉಪಾಧ್ಯಕ್ಷರಾಗಿ ಜೀವನ್‌ ಎರ್ದಡ್ಕ, ಜತೆ ಕಾರ್ಯದರ್ಶಿಯಾಗಿ ಸಚಿನ್‌ ನೇರ್ಪು, ಕ್ರೀಡಾ ಕಾರ್ಯದರ್ಶಿ ಗಿರೀಶ್‌ ಕಾರ್ಜ, ಖಜಾಂಜಿ ಯುವರಾಜ ತಂಟೆಪ್ಪಾಡಿ ಹಾಗೂ ಸದಸ್ಯರುಗಳಾಗಿ ಧನುಷ್‌ ಜತ್ತಿಲ, ಪ್ರದೀಪ್‌ ಅಂಬೆಕಲ್ಲು, ಹರ್ಷಿತ್‌ ಕಲ್ಲಾಜೆ, ನಿಶಿತ್‌ ಮೂರ್ಜೆ, ಗುರುಪ್ರಸಾದ್‌ ಅಂಜೇರಿ, ರಂಜಿತ್‌ ಮರಕತ ಆಯ್ಕೆಗೊಂಡರು. ಹಿರಿಯ ಸದಸ್ಯರುಗಳಾದ ಚಂದ್ರಶೇಖರ ಬಾಳುಗೋಡು, ಗಂಗಾಧರ ಉತ್ರಂಬೆ, ವಿಜಯಕುಮಾರ್‌ ಚಾರ್ಮತ, ನವೀನ್‌ ಬಾಳುಗೋಡು ಹಾಗೂ ಉದಯ ಅಂಜೇರಿ ಗೌರವ ಸಲಹೆಗಾರರಾಗಿ ನೇಮಕಗೊಂಡರು.
ಚಂದ್ರಶೇಖರ ಬಾಳುಗೋಡು ಪ್ರಸ್ತಾವಿಸಿ, ಆಯ್ಕೆ ಪ್ರಕ್ರಿಯೆಗಳನ್ನು ನಿರ್ವಹಿಸಿದರು. ಈ ವೇಳೆ ನಿಕಟಪೂರ್ವ ಕಾರ್ಯದರ್ಶಿ ದಿನೇಶ್‌ ನಡುಗಲ್ಲು, ಸದಸ್ಯರುಗಳಾದ ಸುಬ್ರಹ್ಮಣ್ಯ ಪಾಲ್ತಾಡು, ಹರೀಶ್‌ ಕೊಯಿಲ, ಪ್ರಭಾಕರ್‌ ಪಡ್ರೆ, ಕಿಶೋರ್‌ ಅಂಬೆಕಲ್ಲು, ವಿಶ್ವನಾಥ ಕುತ್ಯಾಳ, ಹರಿಶ್ಚಂದ್ರ ಚಾರ್ಮತ, ಧನುಷ್‌ ಉತ್ರಂಬೆ ಮುಂತಾದವರು ಉಪಸ್ಥಿತರಿದ್ದರು.