ಮುರುಳ್ಯ ಶಾಂತಿನಗರ ಶಾಲೆಯಲ್ಲಿ ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ ಶಾಸ್ತ್ರೀ ಜೀ ಜಯಂತಿ ಆಚರಣೆ

0

ಮುರುಳ್ಯ ಶಾಂತಿನಗರ ಸ ಹಿ ಪ್ರಾ ಶಾಲೆಯಲ್ಲಿ ಅ. ೨ರಂದು ಶಾಲಾ ಪರಿಸರ ಸ್ವಚ್ಚತೆಯೊಂದಿಗೆ ಆರಂಭಗೊಂಡಿತು. ಗಾಂಧಿಜೀ ಮತ್ತು ಶಾಸ್ತ್ರಜೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ನಂತರ ಸಭಾ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ SDMC ಅಧ್ಯಕ್ಷ ದಿನೇಶ್ ನಡುಬೈಲು, ಮುಖ್ಯ ಶಿಕ್ಷಕರು, ಸಹ ಶಿಕ್ಷಕಿ ಉಪಸ್ಥಿತರಿದ್ದರು.
ಸಹಶಿಕ್ಷಕ ಶಸಿಕುಮಾರ್ ಮಹಾತ್ಮರು ದೇಶಕ್ಕೆ ನೀಡಿದ ಕೊಡುಗೆ ಮತ್ತು ಜೀವನಚರಿತ್ರೆಯನ್ನು ವಿವರಿಸಿದರು.


ಸಹಶಿಕ್ಷಕಿ ಹರ್ಷಿತ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ವಿದ್ಯಾರ್ಥಿಗಳು ಸಹ ಶಿಕ್ಷಕರು ಶಾಲಾಭಿವೃದ್ಧಿ ಸಮಿತಿಯವರು
ಪೋಷಕರು ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಉಷಾ ಹೇಮಳ ವಂದಿಸಿದರು.
ನಂತರ ಶಾಲಾಭಿಮಾನಿಗಳು ಕೊಟ್ಟ ಸಿಹಿ ತಿಂಡಿಯನ್ನು ವಿತರಿಸಲಾಯಿತು.