ದೇವಸ್ಥಾನದ ಕ್ಷೇತ್ರಪಾಲ ಕಲ್ಲಿಗಿಂತ ಮುಂದೆ ವಾಹನ ಕೊಂಡುಹೋಗುವ ಹಾಗಿಲ್ಲ

0

“ಸುಳ್ಯ ಚೆನ್ನಕೇಶವ ದೇವಸ್ಥಾನದ ಒಳಾಂಗಣದಲ್ಲಿ ವಾಹನಗಳಿಗೆ ಆಯುಧ ಪೂಜೆ” ಎಂಬ ವರದಿ ಇಂದು ಬೆಳಗ್ಗೆ ಸುದ್ದಿ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿದ್ದು ಅದಕ್ಕೆ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಹರಪ್ರಸಾದರ ಸಹೋದರ ಕೃಪಾ ಶಂಕರ ತುದಿಯಡ್ಕರವರು ಸ್ಪಷ್ಟನೆ ನೀಡಿದ್ದು, “ಅದು ಒಳಾಂಗಣ ಅಲ್ಲ ಹೊರಾಂಗಣ, ಕ್ಷೇತ್ರಪಾಲ ಕಲ್ಲಿಗಿಂತ ಮುಂದೆ ವಾಹನ ಕೊಂಡುಹೋಗುವ ಹಾಗಿಲ್ಲ. ಈ ಹಿಂದೆ ಕೂಡಾ ಮಳೆ ಬರುವ ಸಂದರ್ಭದಲ್ಲಿ ಆ ಜಾಗದಲ್ಲಿ ಪೂಜೆ ಮಾಡಲಾಗುತ್ತಿತ್ತು ಎಂದು ಸುದ್ದಿಗೆ ಅವರು ತಿಳಿಸಿದ್ದಾರೆ.