ಎಣ್ಮೂರು :ಜಿಲ್ಲಾಮಟ್ಟದ ಭಾರತ್ ಸೇವಾದಳದ ಮಕ್ಕಳ ಮೇಳ, ಭಾವೈಕ್ಯತಾ ಶಿಬಿರ ಮತ್ತು ಮಹಾದ್ವಾರದ ನಿರ್ಮಾಣ ಸಮಿತಿ ರಚನೆ

0

ಎಣ್ಮೂರು :ಜಿಲ್ಲಾಮಟ್ಟದ ಭಾರತ್ ಸೇವಾದಳದ ಮಕ್ಕಳ ಮೇಳ, ಭಾವೈಕ್ಯತಾ ಶಿಬಿರ ಮತ್ತು ಮಹಾದ್ವಾರದ ನಿರ್ಮಾಣ ಸಮಿತಿ ರಚನೆ , ಎಣ್ಮೂರು ಸರಕಾರಿ ಪ್ರೌಢಶಾಲಾ ಮಹಾದ್ವಾರದ ನಿರ್ಮಾಣದ ಬಗ್ಗೆ ಊರವರ ಕೂಡುವಿಕೆಯಲ್ಲಿ ಇತ್ತೀಚಿಗೆ ಸಮಿತಿ ರಚನೆಗೊಂಡಿತು.

ಸರಕಾರಿ ಪ್ರೌಢಶಾಲೆ ಎಣ್ಮೂರು ಅಧ್ಯಕ್ಷ ಮೇದಪ್ಪ ಗೌಡ ಎ. ಇವರ ಅಧ್ಯಕ್ಷತೆಯಲ್ಲಿ ಮತ್ತು ಮುಖ್ಯ ಗುರುಗಳಾದ ಟೈಟಸ್ ವರ್ಗೀಸ್ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಮಟ್ಟದ ಭಾರತ್ ಸೇವಾದಳದ ಮಕ್ಕಳ ಮೇಳ ,ಭಾವೈಕ್ಯತಾ ಶಿಬಿರ ಮತ್ತು ಮಹಾದ್ವಾರದ ನಿರ್ಮಾಣ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ವೆಂಕಪ್ಪ ಗೌಡ ಆಲಾಜೆ, ಕಾರ್ಯದರ್ಶಿಯಾಗಿ ಜನಾರ್ದನ, ಅಲೆಕ್ಕಾಡಿ ,ಕೋಶಧಿಕಾರಿಯಾಗಿ ರಮೇಶ್ ಕೋಟೆ, ಸಂಚಾಲಕರಾಗಿ ಕರುಣಾಕರ ಗೌಡ ಹುದೇರಿ ಮತ್ತು ನೋಡೆಲ್ ಶಿಕ್ಷಕರಾಗಿ ಮೋಹನ ಎನಾಜೆ, ಶಾಖಾಧಿಕಾರಿಗಳು, ಭಾರತ್ ಸೇವಾದಳ ಎಣ್ಮೂರು ಹಾಗೂ ಎಸ್‌ಡಿಎಂಸಿ ಸರ್ವ ಸದಸ್ಯರನ್ನು ಆಯ್ಕೆ ಮಾಡಲಾಯಿತು.