ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಯೋಗೇನ ಚಿತ್ತಸ್ಯ ಯೋಗ ಕೇಂದ್ರಕ್ಕೆ ಪ್ರಶಸ್ತಿ

0

ಶ್ರೀ ವೀರಮಾರುತಿ ಸೇವಾ ಟ್ರಸ್ಟ್ ಮೂಡಬಿದ್ರೆಯ ಆಶ್ರಯದಲ್ಲಿ 35ನೇ ವರ್ಷದ ಮೂಡಬಿದಿರೆ ಶ್ರೀ ಶಾರದೋತ್ಸವದ ಪ್ರಯುಕ್ತ ಯೋಗಶ್ರೀ ಯೋಗ ಬಳಗ ಮಂಗಳೂರಿನ ಸಹಯೋಗದಲ್ಲಿ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯು ಅ‌. 09 ರಂದು ಶ್ರೀ ವೆಂಕಟರಮಣ ದೇವಸ್ಥಾನ ವಠಾರ ಮೂಡಬಿದ್ರೆಯಲ್ಲಿ ನಡೆಯಿತು.

1 ರಿಂದ 4 ನೇ ತರಗತಿ ಬಾಲಕರ ವಿಭಾಗದಲ್ಲಿ ವಿದಾತ್ ಎಂ.ಟಿ ಗೌಡ ಪ್ರಥಮ ತೀರ್ಥರಾಮ ಮುಡೂರು ಹಾಗೂ ಪೂರ್ಣಿಮಾ ಎ.ಜೆ ದಂಪತಿಗಳ ಪುತ್ರ.
1 ರಿಂದ 4 ನೇ ತರಗತಿ ಬಾಲಕರ ವಿಭಾಗದಲ್ಲಿ ಆಶ್ರೀತ್ ಎ.ಸಿ ತೃತೀಯ ಚೇತನ್ ಅಮೆಮನೆ ಮತ್ತು ದಿವ್ಯ .ಕೆ ರವರ ಪುತ್ರ.5 ರಿಂದ 7ನೇ ತರಗತಿ ಬಾಲಕರ ವಿಭಾಗದಲ್ಲಿ ಶ್ರೀಶೌರ್ಯ ಪ್ರಥಮ ಚಂದ್ರಶೇಖರ್ ಹಾಗೂ ಸವಿತಾ ದಂಪತಿಗಳ ಪುತ್ರ. ಕಾಲೇಜು ಹುಡುಗಿಯರ ವಿಭಾಗದಲ್ಲಿ ಕ್ಷಮಾ ತೃತೀಯ ಸ್ಥಾನ ತೀರ್ಥರಾಮ ಮುಡೂರು ಹಾಗೂ ಪೂರ್ಣಿಮಾ ಎ.ಜೆ ಇವರ ಪುತ್ರಿ.ಇವರಿಗೆ ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸುಳ್ಯದ ಯೋಗ ಶಿಕ್ಷಕರಾದ ಸಂತೋಷ್ ಮುಂಡಕಜೆ ಹಾಗೂ ಪ್ರಶ್ವಿಜ ಸಂತೋಷ್ ಮಾರ್ಗದರ್ಶನ ನೀಡಿರುತ್ತಾರೆ.