ಬೆಳ್ಳಾರೆಯಲ್ಲಿ ಚಂದಿರ ಕ್ಲೋತ್ ಡಿಸೈನರ್ ಶುಭಾರಂಭ

0

ಬೆಳ್ಳಾರೆಯ ಕೆಳಗಿನ ಪೇಟೆಯಲ್ಲಿ ಶ್ರೀಮತಿ ಸುಜಾತ ಚಂದ್ರಕಾಂತ ಸಾರಕರೆ ಮತ್ತು ಶ್ರೀಮತಿ ಶೋಭನಾ ಚಂದ್ರಶೇಖರ ಪನ್ನೆ ಯವರ ಮಾಲಕತ್ವದ ಚಂದಿರ ಕ್ಲೋತ್ ಡಿಸೈನರ್ ಅ.11 ರಂದು ಶುಭಾರಂಭಗೊಂಡಿತು.


ಸುಬ್ರಾಯ ಭಟ್ ಪಂಜರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.


ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ರಿಬ್ಬನ್ ಕಟ್ ಮಾಡುವ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಮಾಲಕರಾದ ಶ್ರೀಮತಿ ಸುಜಾತ ಚಂದ್ರಕಾಂತ ಸಾರಕರೆ, ಗೌರಿಪುರಂ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು,ಬೆಳ್ಳಾರೆ ಗ್ರಾ.ಪಂ.ಸದಸ್ಯ ಚಂದ್ರಶೇಖರ ಪನ್ನೆ,ಲೋಕಯ್ಯ ಗೌಡ ಕೋಡಿಗದ್ದೆ, ಶ್ರೀಮತಿ ಜಾನಕಿ, ಕು.ತನ್ವಿ,ಕು.ತನುಶ್ರೀ, ಕು.ತಪಸ್ವಿ , ನವೀನ್ ಕುಮಾರ್ ಸಾರಕರೆ, ಮಹಾಲಿಂಗ ಬೆಳ್ಳಾರೆ, ವಸಂತ ಉಲ್ಲಾಸ್, ಪ್ರೇಮಚಂದ್ರ ಬೆಳ್ಳಾರೆ ,ಗಣೇಶ್ ಮುದ್ದಾಜೆ,ಆರೀಫ್ ಬೆಳ್ಳಾರೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


ಸುಳ್ಯ ತಾಲೂಕು ಕಚೇರಿ ಉಪತಹಶೀಲ್ದಾರ್ ಚಂದ್ರಕಾಂತರವರು ಸ್ವಾಗತಿಸಿ,ವಂದಿಸಿದರು.


ಇಲ್ಲಿ ಟೈಲರಿಂಗ್ ಮೆಟೀರಿಯಲ್,ಎಂಬ್ರಾಯಿಡರಿ,ಲೇಡಿಸ್ ಟೈಲರಿಂಗ್ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.