ಶೇಷಮ್ಮ ಸೇರ್ಕಜೆ-ಮೋಂಟಡ್ಕರವರ ಶ್ರದ್ದಾಂಜಲಿ ಕಾರ್ಯಕ್ರಮ

0

ಅ. 3ರಂದು ನಿಧನರಾದ ಸುಳ್ಯ ಕಸಬಾ ಗ್ರಾಮದ ಸೇರ್ಕಜೆ-ಮೋಂಟಡ್ಕ ದಿ. ತಮ್ಮಪ್ಪ ಗೌಡರ ಧರ್ಮಪತ್ನಿ ಹಾಗೂ ಸಿ.ಎ. ಬ್ಯಾಂಕ್ ಅಧ್ಯಕ್ಷರಾಗಿದ್ದ ದಿ. ಚೆನ್ನಕೇಶವ ಸೇರ್ಕಜೆಯವರ ತಾಯಿ ಶೇಷಮ್ಮ ಸೇರ್ಕಜೆ-ಮೋಂಟಡ್ಕರವರ ಶ್ರದ್ದಾಂಜಲಿ ಕಾರ್ಯಕ್ರಮವು ಸುಳ್ಯದ ಅಮರಶ್ರೀಭಾಗ್‌ನಲ್ಲಿರುವ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ಅ. 13 ರಂದು ನಡೆಯಿತು.

ಎಂ.ಬಿ.ಸದಾಶಿವರವರು ಮೃತರ ಬಗ್ಗೆ ನುಡಿನಮನ ಸಲ್ಲಿಸಿ, ಮೃತರ ಭಾವಚಿತ್ರಕ್ಕೆ ಪುಷ್ಪನಮನಗೈದರು.


ಈ ಸಂದರ್ಭದಲ್ಲಿ ಮೃತರ ಮಕ್ಕಳಾದ ವಾಸುದೇವ ಸೇರ್ಕಜೆ-ಮೋಂಟಡ್ಕ, ಶ್ರೀಮತಿ ಗಿರಿಜಾ ವಾಸುದೇವ ಮುರೂರು, ಶ್ರೀಮತಿ ಶಾರದಾ ವೆಂಕಪ್ಪ ಮಳುವೇಲು, ಕರುಣಾಕರ ಸೇರ್ಕಜೆ-ಮೋಂಟಡ್ಕ, ಬಾಲಚಂದ್ರ ಸೇರ್ಕಜೆ-ಮೋಂಟಡ್ಕ, ದಿವಾಕರ ಸೇರ್ಕಜೆ-ಮೋಂಟಡ್ಕ, ಬಾಲಗೋಪಾಲ ಸೇರ್ಕಜೆ-ಮೋಂಟಡ್ಕ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಹಾಗೂ ಮೃತರ ಬಂಧುಗಳು, ಊರವರು ಉಪಸ್ಥಿತರಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.