ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಅಪಘಾತ ಗಳನ್ನು ತಡೆಯಬಹುದು : ದಳ ಸುಬ್ರಾಯ ಭಟ್

0

ಸಂಚಾರಿ ನಿಯಮಗಳನ್ನು ನಾವೆಲ್ಲರೂ ಪಾಲಿಸಬೇಕು ಇದರಿಂದ ನಮ್ಮ ಸುರಕ್ಷತೆಯನ್ನು ಕಾಪಾಡಿ ಕೊಳ್ಳಬಹುದು ಎಂದು ಸುಲ್ಯದ ನೋಟರಿ ವಕೀಲರಾದ ದಳ ಸುಬ್ರಾಯ ಭಟ್ ಹೇಳಿದರು. ಅವರು ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಸ್ತೆ ಸುರಕ್ಷತೆ ಮತ್ತು ನಿಯಮಗಳು ಎಂಬ ವಿಷಯದ ಕುರಿತಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡುತ್ತಿದ್ದರು. ಸಭೆಯ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷರಾದ ಯೋಗಿತಾ ಗೋಪಿನಾಥ್ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಸತೀಶ್ ಕುಮಾರ್ ಕೆ ಆರ್, ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಲತಾ ಎಂ ರೈ, ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಉದಯ ಶಂಕರ ಹೆಚ್, ರೋಟೀರಿಯನ್ ಕಸ್ತೂರಿ ಶಂಕರ್, ರಾಮ್ ದಾಸ್ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಿನ್ಸಿಪಾಲ್ ಸತೀಶ್ ಕುಮಾರ್ ಕೆ ಆರ್ ಪ್ರಸ್ತಾವಿಕ ವಾಗಿ ಮಾತನಾಡಿದರು. ಉದಯ ಶಂಕರ್ ಹೆಚ್ ಸ್ವಾಗತಿಸಿ ರೋಟರಿ ಕ್ಲಬ್ ಸುಳ್ಯ ಇದರ ಕಾರ್ಯದರ್ಶಿ ಹರ್ಷಿತ ಪುರುಷೋತ್ತಮ ವಂದಿಸಿದರು. ವಿದ್ಯಾರ್ಥಿಗಳಾದ ಹಂಶಿನಿ ಹಾಗೂ ಪ್ರಶನ್ಯ ಪ್ರಾರ್ಥಿಸಿದರು.