ಶಮಂತ್ ಕೆದಂಬಾಡಿ ರಾಜ್ಯಮಟ್ಟದ ಕಬಡ್ಡಿಕೂಟಕ್ಕೆ ಆಯ್ಕೆ

0

ಕೊಡಗು ಸಂಪಾಜೆಯ ಪ್ರತಿಭಾನ್ವಿತ ಯುವ ಕಬಡ್ಡಿ ಆಟಗಾರ ಶಮಂತ್ ಕೆದಂಬಾಡಿ ಅವರು ಚೆನ್ನೈಯಲ್ಲಿ ನ.1ರಂದು ನಡೆಯಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ. ಅಂತರ್ ಕಾಲೇಜು ರಾಜ್ಯಮಟ್ಟದ ಕಬಡ್ಡಿಕೂಟಕ್ಕೆ ಆಯ್ಕೆಯಾಗಿದ್ದಾರೆ.

ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಬಿ.ಎಸ್ಸಿ ಎಂ.ಎಲ್.ಟಿ. ವ್ಯಾಸಂಗ ಮಾಡುತ್ತಿರುವ ಶಮಂತ್ ಅವರು ಸಂಪಾಜೆಯ ಜಗದೀಶ್ ಕೆದಂಬಾಡಿ ಮತ್ತು ಶ್ರೀಮತಿ ವಾಣಿ ದಂಪತಿಯ ಪುತ್ರ.