ಅರಂತೋಡು ಸ. ಹಿ. ಪ್ರಾ.ಶಾಲೆಯಲ್ಲಿ ನೂತನ ಧ್ವಜಸ್ತಂಭ ಉದ್ಘಾಟನೆ ಹಾಗೂ ಸ್ವಾತಂತ್ರ‍್ಯ ದಿನಾಚರಣೆ ಆಚರಣೆ

0

ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ದೇಶದ ೭೯ನೇ ಸ್ವಾತಂತ್ರೋತ್ಸವದ ಅಂಗವಾಗಿ ದಿ.ಕುರುಂಜಿ ರಾಮಯ್ಯ ಮಾಸ್ತರ್ ಸ್ಮರಣಾರ್ಥ ಕೊಡಮಾಡಿದ ನೂತನ ಧ್ವಜ ಸ್ತಂಭದ ಉದ್ಘಾಟನೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ವಹಿಸಿದ್ದರು. ಧ್ವಜ ಸ್ತಂಭ ಉದ್ಘಾಟನೆಯನ್ನು ಅರಂತೋಡು ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ನಿವೃತ ಮೋಖ್ಯೋಪಾಧ್ಯಾಯ ಜತ್ತಪ್ಪ ಎ.ಕೆ.ನೆರವೇರಿಸಿದರು. ಕಾರ್ಯಕ್ರಮದಲ್ಲಿ ನಿವೃತ ಪ್ರಾಂಶುಪಾಲರು ಧ್ವಜಸ್ತಂಭ ದಾನಿಗಳಾದ ಕೆ.ಆರ್.ಗಂಗಾಧರ ಕುರುಂಜಿ, ಕೆಡಿಪಿ ಸದಸ್ಯ ಅಶ್ರಫ್ ಗುಂಡಿ, ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ್ ಯು.ಕೆ, ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್ ಸೇರಿದಂತೆ ಹಿರಿಯ ವಿದ್ಯಾರ್ಥಿ ಗಳು ಪೋಷಕ ವೃಂದದವರು, ಶಿಕ್ಷಕ ವ್ರಂದವರು ಪಾಲ್ಗೊಂಡರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.