ಗುತ್ತಿಗಾರು ಗ್ರಾಮದ ವಳಲಂಬೆ ನಿವಾಸಿ ಕೆ.ವಿ. ಮಹಾಬಲೇಶ್ವರ ಭಟ್ರವರ ತಂದೆ ವೆಂಕಟ್ರಮಣ ಭಟ್ರವರು ಅ. 11 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.















ಮೃತರು ಪತ್ನಿ ಲಕ್ಷ್ಮೀ, ಪುತ್ರ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಮಹಾಬಲೇಶ್ವರ ಭಟ್, ಮತ್ತೋರ್ವ ಪುತ್ರ ಪಂಜ ಪಂಚಲಿಂಗೇಶ್ವರ ದೇವಾಲಯದಲ್ಲಿ ಅರ್ಚಕರಾಗಿರುವ ರಾಮಚಂದ್ರ ಭಟ್, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.










