ಚೆಂಬುವಿನಲ್ಲಿ ಭಾರೀ ಮಳೆ : ಬೈಕ್ ಸಹಿತ ಕೊಚ್ಚಿ ಹೋದ ಯುವಕ

0

ಅಪಾಯದಿಂದ ಪಾರು

ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಯುವಕನೋರ್ವ ಬೈಕ್ ಸಮೇತ ಕೊಚ್ಚಿ ಹೋಗಿದ್ದು, ಅಪಾಯದಿಂದ ಪಾರಾದ ಘಟನೆ ಚೆಂಬು ಗ್ರಾಮದ ಹೊದ್ದೆಟ್ಟಿಯಲ್ಲಿ ಸಂಭವಿಸಿದೆ.
ಚೆಂಬು ಗ್ರಾಮದ ಹೊಸೂರು ಜಯರಾಮ ಅವರ ಪುತ್ರ ನಿರುಪಮರವರು ನಿನ್ನೆ ಸಂಜೆ ೬ ಗಂಟೆಯ ಸುಮಾರಿಗೆ ಕಲ್ಲುಗುಂಡಿಯಿಂದ ತನ್ನ ಮನೆಗೆ ಹೋಗುತ್ತಿದ್ದಾಗ ಹೊದ್ದೆಟ್ಟಿಯ ಮಕ್ಕಟ್ಟಿ ಬಳಿ ಹೊಳೆ ದಾಟುವಾಗ ಮಧ್ಯದಲ್ಲಿ ಒಮ್ಮೆಲೇ ನೀರು ಬಂದು ಕೊಚ್ಚಿ ಹೋದರು. ಸುಮಾರು ೩೦೦ ಮೀಟರ್‌ನಷ್ಟು ದೂರ ಕೊಚ್ಚಿ ಹೋದ ಯುವಕ ನಂತರ ಕಲ್ಲಿನ ಸಹಾಯದಿಂದ ಮೇಲೆ ಬಂದರು. ಬೈಕ್ ಕೊಚ್ಚಿಕೊಂಡು ಕೆಳಕ್ಕೆ ಹೋಗಿದ್ದು, ಇಂದು ಬೆಳಗ್ಗಿನ ಹೊತ್ತು ಹೋಗಿ ನೋಡಿದಾಗ ಬೈಕ್ ನುಜ್ಜುಗುಜ್ಜಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.


ಇಲ್ಲಿ ಸೇತುವೆ ಆಗಬೇಕೆಂದು ಹಲವಾರು ವರ್ಷಗಳಿಂದ ಬೇಡಿಕೆ ಇದ್ದರೂ ಇದುವರೆಗೂ ಯಾವುದೇ ಪ್ರಯತ್ನ ಫಲಕಾರಿಯಾಗಲಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.