ಅ. 3: ಕಲ್ಮಡ್ಕ ಶ್ರೀರಾಮ ಮಂದಿರದಲ್ಲಿ 7ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ

0

 

ವೈದೇಹಿ ಯುವತಿ ಮಂಡಲ ಕಲ್ಮಡ್ಕ ಮತ್ತು ಶ್ರೀ ಶಾರದೋತ್ಸವ ಸಮಿತಿ ಕಲ್ಮಡ್ಕ ಇದರ ಆಶ್ರಯದಲ್ಲಿ 7ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ. 3ರಂದು ಕಲ್ಮಡ್ಕದ ಶ್ರೀರಾಮ ಮಂದಿರದಲ್ಲಿ ಜರಗಲಿದೆ.
ಬೆಳಿಗ್ಗೆ 8.00 ಗಂಟೆಗೆ ಶಾರದಾ ದೇವಿಯ ಪ್ರತಿಷ್ಠೆ, ಪೂಜೆ, ಗಣಪತಿ ಹೋಮ, ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಂಗಳಾರತಿ, ಪ್ರಸಾದ ಭೋಜನ, ಅಪರಾಹ್ನ 2.00ರಿಂದ ಶ್ರೀ ಶಾರದಾ ದೇವಿಯ ಶೋಭಯಾತ್ರೆ ನಡೆಯಲಿದೆ. ಸಂಜೆ ಗಂಟೆ 5.00 ರಿಂದ ಅಂಗನವಾಡಿ, ಕಲ್ಮಡ್ಕ ಶಾಲಾ ಮಕ್ಕಳಿಂದ ಮತ್ತು ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 7.00 ಗಂಟೆಯಿಂದ ಶ್ರೀರಾಮ ಮಂದಿರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಗೋವಿಂದಯ್ಯ ಜೆ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದ್ದು, ಹಿರಿಯ ವಿದ್ವಾಂಸರಾದ ಡಾ. ಪ್ರಭಾಕರ ಶಿಶಿಲ, ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕಿ ಶ್ರೀಮತಿ ಶಶಿಕಲಾ ದೇವ, ಕುಶಾಲನಗರದ ಕವಯತ್ರಿ ಶ್ರೀಮತಿ ಲೀಲಾವತಿ ತೊಡಿಕಾನ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಲ್ಮಡ್ಕ ಗ್ರಾ.ಪಂ. ಸದಸ್ಯೆ ಶ್ರೀಮತಿ ಮೀನಾಕ್ಷಿ ಬೊಮ್ಮೆಟ್ಟಿ ಉಪಸ್ಥಿತರಿರಲಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಸರಸ್ವತಿ ಕಟ್ಟೆಹಿತ್ಲುರವರನ್ನು ಈ ಸಂದರ್ಭದಲ್ಲಿ ಸನ್ಮಾನ ಮತ್ತು ಗ್ರಾಮ ಲೆಕ್ಕಾಧಿಕಾರಿ ಶ್ರೀಮತಿ ಪ್ರೇಮಲತಾ ಲೋಕೇಶ್ ರಿಗೆ ಅಭಿನಂದನೆ ನಡೆಯಲಿದೆ. ರಾತ್ರಿ 8.00ರಿಂದ ಕಲಾಗ್ರಾಮ ಕಲ್ಮಡ್ಕ ಇವರಿಂದ ಸಾಯಿನಾರಾಯಣ ನಿರ್ದೇಶನದಲ್ಲಿ ಡಾ. ಪ್ರಭಾಕರ ಶಿಶಿಲರು ಸಾಹಿತ್ಯ ನೀಡಿರುವ ನಾಟಕ ಅಮರ ಸಂಗ್ರಾಮ 1837 ನಡೆಯಲಿದೆ.