ಸುಳ್ಯ ಸೈಂಟ್ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿ ಸರಕಾರದ ಪದಗ್ರಹಣ

0


ಸುಳ್ಯದ ಸೈಂಟ್ ಜೋಸೆಫ್ ಪ್ರೌಢಶಾಲೆಯ ನೂತನ ಸಾಲಿನ ವಿದ್ಯಾರ್ಥಿ ಸರಕಾರದ ಪದಗ್ರಹಣ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಶಾಲಾ ಸಂಚಾಲಕರಾದ ರೆ.ಫಾ. ವಿಕ್ಟರ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸಿ.ಬಿನೋಮಾ ವಿದ್ಯಾರ್ಥಿ ಸರಕಾರದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.


ಎಸ್‌ಪಿಎಲ್ ಫಾತಿಮತ್ ಶಮ್ನಾ, ಎಎಸ್‌ಪಿಎಲ್ ಸಮನ್ಯು ಎಸ್.ಶೆಟ್ಟಿ, ಸ್ಪೀಕರ್ ಸಾನ್ವಿ ಪಿ.ಎನ್., ಗವರ್ನರ್ ಸಂಜಯ್ ಬಾಬು, ವಿರೋಧ ಪಕ್ಷ ನಾಯಕಿ ಸಮೀಕ್ಷಾ ಗಣೇಶ್ ಸಹಿತ ವಿದ್ಯಾರ್ಥಿ ಸರಕಾರದ ಪ್ರತಿನಿಧಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿ ಜವಾಬ್ದಾರಿ ವಹಿಸಿಕೊಂಡರು.


ವಿದ್ಯಾರ್ಥಿಗಳಾದ ಶ್ರೇಯಸ್ ಸ್ವಾಗತಿಸಿ, ತ್ರಿಶನ್ ವಂದಿಸಿದರು. ಸುಗುಣ ಮತ್ತು ಆಯುಷ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಕೊರಗಪ್ಪ ಬೆಳ್ಳಾರೆ, ಉಷಾದೇವಿ, ಅನಿತಾ ಮಸ್ಕರೇನಸ್ ಸಹಕರಿಸಿದರು.