ಬೆಳ್ಳಾರೆಯ ಬಸ್ತಿಗುಡ್ಡೆಯಲ್ಲಿ ಅಪಾಯವನ್ನು ಆಹ್ವಾನಿಸುತ್ತಿರುವ ವಿದ್ಯುತ್ ಲೈನ್

0

ಬೆಳ್ಳಾರೆಯಿಂದ ಬಸ್ತಿಗುಡ್ಡೆಯಾಗಿ ಶೇಣಿಗೆ ಹೋಗುವ ರಸ್ತೆಯಲ್ಲಿ ಬಸ್ತಿಗುಡ್ಡೆ ಬಳಿ ವಿದ್ಯುತ್ ಲೈನಿನ ಮೇಲೆ ಕಾಡು ಬೆಳೆದು ಅಪಾಯದ ಸ್ಥಿತಿ ನಿರ್ಮಾಣವಾಗಿದೆ.


ವಿದ್ಯುತ್ ಲೈನಿನ ಮೇಲೆ ಮರ ವಾಲಿಕೊಂಡಿರುವುದಲ್ಲದೆ, ಕಾಡು ಬಳ್ಳಿಗಳೂ ಹರಡಿಕೊಂಡಿದ್ದು, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರಿಗೆ ಅಪಾಯ ಕಾದಿದೆ. ತಕ್ಷಣ ಸಂಬಂಧಿಸಿದ ಇಲಾಖೆಯವರು, ಜನಪ್ರತಿನಿಧಿಗಳು ಈ ಕಡೆ ಗಮನ ಹರಿಸಿ ಸಂಭಾವ್ಯ ಅಪಾಯಗಳನ್ನು ತಪ್ಪಿಸಬೇಕೆಂದು ರಸ್ತೆಯಲ್ಲಿ ಸಂಚರಿಸುವವರು ಮನವಿಮಾಡಿಕೊಂಡಿದ್ದಾರೆ.