ಅರಂಬೂರು: ಮಹಾಲಕ್ಷ್ಮಿ ಲೇಡಿಸ್ ಟೈಲರಿಂಗ್ ತರಬೇತಿ ಕೇಂದ್ರ ಮತ್ತು ವಸ್ತ್ರ ಮಳಿಗೆ ಶುಭಾರಂಭ

0

ಅರಂಬೂರು ಸರಳಿಕುಂಜದಲ್ಲಿ ಶ್ರೀಮತಿ ವಾಣಿ ವಿಠಲ ನಾಯ್ಕ್ ದೋಣಿಮೂಲೆ ಯವರ ಮಾಲಕತ್ವದ ಮಹಾಲಕ್ಷ್ಮಿ ಲೇಡಿಸ್ ಟೈಲರಿಂಗ್ ತರಬೇತಿ ಕೇಂದ್ರ ಹಾಗೂ ಮಹಿಳೆಯರ ವಸ್ತ್ರ ಮಳಿಗೆಯು
ಜೂ.28 ರಂದು ಶುಭಾರಂಭಗೊಂಡಿತು. ಮಳಿಗೆಯನ್ನು ಸ್ಥಳೀಯರಾದ ಶ್ರೀಮತಿ ನಳಿನಿಕೃಷ್ಣ ಕಾಮತ್ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುಮನ ಶೆಣೈ ಸುಳ್ಯ, ನಿವೃತ್ತ ಶಿಕ್ಷಕ ದಿವಾಕರ ನಾಯಕ್ ಅರಂಬೂರು, ಶ್ರೀಮತಿ ಚಂದ್ರಕಲಾ ಅರಂಬೂರು, ಶ್ರೀಮತಿ ಕಮಲ ದೋಣಿಮೂಲೆ, ಶ್ರೀಮತಿ ಚಂದ್ರಾವತಿ ಬಡ್ಡಡ್ಕ, ಶ್ರೀಮತಿ ವಿನುತ, ಗಣೇಶ್ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು.

ವಿಠಲ ದೋಣಿಮೂಲೆ ಸ್ವಾಗತಿಸಿದರು. ಪುನೀತ್ ಮತ್ತು ನಿಖಿಲ್ ಸಹಕರಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.