ಅಡ್ಕಾರಿನಲ್ಲಿ ಮನೆಯ ಬೀಗ ಮುರಿದು ಸಾವಿರಾರು ರೂ. ನಗದು ಕಳ್ಳತನ

0

ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಣ ದೋಚಿ ಪರಾರಿ

ಪೊಲೀಸ್ ದೂರು ದಾಖಲು – ಪೊಲೀಸರಿಂದ ಸ್ಥಳ ಪರಿಶೀಲನೆ

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ರಾತ್ರಿಯ ವೇಳೆ ಮನೆಯ ಬೀಗ ಮುರಿದು ನಗದು ಕಳ್ಳತನ ಮಾಡಿರುವ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಜು.1ರಂದು ರಾತ್ರಿ ಸಂಭವಿಸಿದ್ದು,
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಾಗಿದ್ದು , ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಸಂಭವಿಸಿದೆ.

ಅಡ್ಕಾರಿ‌ನ ಮಹಮ್ಮದ್ ನಜೀಬ್ ಅವರು ತಮ್ಮ ಹೆಂಡತಿಯ ತವರು ಮನೆಯಾದ ಪುತ್ತೂರಿಗೆ ಜು.1ರಂದು ಸಂಜೆ ಮನೆಗೆ ಬೀಗ ಹಾಕಿ ತೆರಳಿದ್ದರೆನ್ನಲಾಗಿದೆ. ಮರುದಿನ ಜು.2ರಂದು ಬೆಳಿಗ್ಗೆ ಪುತ್ತೂರಿನಿಂದ ಮರಳಿ ಮನೆಗೆ ಬಂದಾಗ ಮನೆಯ ಬಾಗಿಲಿನ ಲಾಕ್ ಮುರಿದಿದ್ದು, ಒಳಗೆ ಹೋಗಿ ನೋಡಿದಾಗ ಮನೆಯ ಗೋಡ್ರೇಜಿನಲ್ಲಿ ಇರಿಸಿದ್ದ ಸುಮಾರು ಎಂಭತ್ತು ಸಾವಿರ ರೂ. ನಗದು ಹಾಗೂ ಹಾಗೂ ನಜೀಬ್ ಅವರ ತಾಯಿಯ ಕೋಣೆಯ ಗೋಡ್ರೇಜ್ ನಲ್ಲಿ ಇರಿಸಿದ್ದ ಹದಿನೈದು ಸಾವಿರ ರೂ. ನಗದು ಸೇರಿ ಒಟ್ಟು ತೊಂಭತ್ತೈದು ಸಾವಿರ ರೂ. ನಗದು ಹಣ ಕಳವಾಗಿದ್ದು, ಕಂಡುಬಂದಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆಗೆ ಕಳ್ಳರ ಗುಂಪು ಮನೆಯ ಬೀಗ ಮುರಿದು ಈ ಕೃತ್ಯ ಎಸಗಿದ್ದು, ನಜೀಬ್ ಅವರು ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪೊಲೀಸರು ಜು.3ರಂದು ಬೆಳಿಗ್ಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ತೊಡಗಿದ್ದಾರೆ ಎಂದು ತಿಳಿದುಬಂದಿದೆ.