ನೀರು ಪಾಲಾದ ಕೂಲಿ ಕಾರ್ಮಿಕನ ಶೋಧ: ಮೂರನೇ ದಿನದ ಕಾರ್ಯಾಚರಣೆ ಅಂತ್ಯ

0

ಇನ್ನೂ ದೊರೆಯದ ಸುಳಿವು: ನಾಳೆ ಮತ್ತೆ ಕಾರ್ಯಾಚರಣೆ

ಕೂರ್ನಡ್ಕ ಗಡಿ ಪ್ರದೇಶದಲ್ಲಿ ಮೊನ್ನೆ ನೀರು ಪಾಲಾದ ಕೂಲಿ ಕಾರ್ಮಿಕನ ಶೋಧ ಕಾರ್ಯಾಚರಣೆ ಮೂರನೇ ದಿನವಾದ ಇಂದೂ ಮುಂದುವರಿದಿದ್ದು, ಪತ್ತೆ ಸಾಧ್ಯವಾಗಿಲ್ಲ.

ಇಂದು ಬೆಳಗ್ಗಿನಿಂದಲೇ
ಸುಳ್ಯ ಅಗ್ನಿಶಾಮಕ ದಳದವರು, ಎಸ್.ಡಿ.ಆರ್.ಎಫ್ ತಂಡ, ಪೋಲಿಸ್ ಇಲಾಖೆಯವರು ಹಾಗೂ ಎಣ್.ಕೆ.ಎಸ್.ಎಸ್.ಎಫ್ ನ ಅರಂತೋಡು ಕಲ್ಲುಗುಂಡಿ ವಿಖಾಯ ತಂಡದ ಮುಳುಗು ತಜ್ಞರು ಹುಡುಕಾಟ ನಡೆಸಿದರು.
ಸುರಿಯುವ ಮಳೆಯನ್ನೂ ಲೆಕ್ಕಿಸದೆ ಇಂದು ಬೆಳಗ್ಗಿನಿಂದ ಸಂಜೆಯ ತನಕ ಶೋಧ ಕಾರ್ಯಾಚರಣೆ ನಡೆಸಲಾಯಿತು. ಕುಕ್ಕಂಬಳದಿಂದ ಕೂರ್ನಡ್ಕದವರೆಗೆ ಹೊಳೆಯಲ್ಲಿ ಸಾಗಿ ಶೋಧ ಕಾರ್ಯ ನಡೆದರೂ ನೀರುಪಾಲಾದ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ನಾಳೆಯೂ ಕಾರ್ಯಾಚರಣೆ ಮುಂದುವರಿಸಲಿದ್ದಾರೆ ಎಂದು ತಿಳಿದು ಬಂದಿದೆ.