ಸುಬ್ರಹ್ಮಣ್ಯದಲ್ಲಿ ಶ್ರೀ ಅಕ್ಷರಾ ಟೆಕ್ಸ್ ಟೈಲ್ ಶುಭಾರಂಭ

0

ವಿದ್ಯಾ ಪ್ರಸನ್ನ ಶ್ರೀಗಳಿಂದ ದೀಪ ಬೆಳಗಿಸಿ ಉದ್ಘಾಟನೆ

ಸುಬ್ರಹ್ಮಣ್ಯದ ಶ್ರೀ ವಿಷ್ಣು ತೀರ್ಥ ಸಂಕೀರ್ಣದಲ್ಲಿ ಇಂದು
ಶ್ರೀ ಅಕ್ಷರಾ ಟೆಕ್ಸ್ ಟೈಲ್ ಶುಭಾರಂಭಗೊಂಡಿತು.

ಶ್ರೀ ಸುಬ್ರಹ್ಮಣ್ಯ ಮಠದ ಶ್ರೀಗಳಾದ ವಿದ್ಯಾ ಪ್ರಸನ್ನ ಶ್ರೀಗಳು ರಿಬ್ಬನ್ ತುಂಡರಿಸಿ, ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ, ಕೆ ಎಸ್ ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ. ಆರ್ ಶೆಟ್ಟಿಗಾರ್, ನಿವೃತ್ತ ಪ್ರಾಚಾರ್ಯ ಉದಯಕುಮಾರ್, ನಿವೃತ್ತ ಉಪನ್ಯಾಸಕ ಎಸ್ ಎನ್ ಉಡುಪ, ನಿವೃತ್ತ ಮಾಜಿ ತಾ.ಪಂ ಸದಸ್ಯರು ಕೆ.ಆರ್ ವಿಮಲಾ ರಂಗಯ್ಯ, ಅಶೋಕ್ ನೆಕ್ರಾಜೆ, ಗೋಪಾಲ ಎಣ್ಣೆಮಜಲು, ‌ಭರತ್ ನೆಕ್ರಾಜೆ, ಬಿಪಿನ್ ಜಾಕೆ, ರವೀಂದ್ರ ನೂಚಿಲ, ಲೋಕೇಶ್ ಬಳ್ಳಡ್ಕ ಮತ್ತಿತರರು ಉಪಸ್ಥಿತರಿದ್ದರು.

ನಮ್ಮಲ್ಲಿ
ಮಕ್ಕಳ, ‌ಮಹಿಳೆಯರ, ಪುರುಷರ ಎಲ್ಲಾ ವಿಧದ ಬ್ರಾಂಡೆಡ್ ಬಟ್ಟೆಗಳನ್ನು ಸಿದ್ದ ಉಡುಪುಗಳು ಹಾಗೂ ಚಪ್ಪಲಿಗಳು ಕೈಗೆಟುಕುವ ದರದಲ್ಲಿ ಸಿಗಲಿವೆ ಎಂದು ಸಂಸ್ಥೆಯ ಮಾಲಕ ದಿನೇಶ್ ಮೊಗ್ರ ತಿಳಿಸಿದ್ದಾರೆ.