ಆಲೆಟ್ಟಿ ಗ್ರಾಮದ ನಾಗಪಟ್ಟಣ,ಮಿತ್ತಡ್ಕ, ಅರಂಬೂರು ಭಾಗದಲ್ಲಿ ಸರಣಿ ಕಳ್ಳತನ

0

ಆಲೆಟ್ಟಿ ಗ್ರಾಮದ ವ್ಯಾಪ್ತಿಯಲ್ಲಿರುವ ಪಂಚಾಯತ್ ಕಟ್ಟಡದಲ್ಲಿ ವ್ಯಾಪಾರ ನಡೆಸುತ್ತಿರುವ ಅಂಗಡಿಗಳಿಗೆ ಜು.11 ರ ತಡರಾತ್ರಿ ಕಳ್ಳರು ನುಗ್ಗಿರುವ ಘಟನೆ ವರದಿಯಾಗಿದೆ.

ಮಿತ್ತಡ್ಕ ರೋಟರಿ ಶಾಲೆ ಬಳಿಯ ಪಂಚಾಯತ್ ಕಟ್ಟಡದಲ್ಲಿ ದಾಮೋದರ ಪೂಜಾರಿ ಕುದ್ಕುಳಿ ಯವರ ಅಂಗಡಿಯ ಬೀಗ ಮುರಿದು ಕೈಗೆ ಸಿಕ್ಕಿದ 6 ಸಾವಿರ ನಗದು ಕದ್ದೊಯ್ದಿದ್ದಾರೆ. ನಾಗಪಟ್ಟಣ ದೇವಸ್ಥಾನದ ಬಳಿಯ ಪಂಚಾಯತ್ ಕಟ್ಟಡದಲ್ಲಿ ವ್ಯಾಪಾರ ನಡೆಸುತ್ತಿದ್ದ ಪುಷ್ಪರಾಜ ಎಂಬವರಿಗೆ ಸೇರಿದ್ದ ಅಂಗಡಿಯಿಂದ ರೂ 1,500 ಸಾವಿರದಷ್ಟು ಕಳ್ಳತನ ಮಾಡಿದ್ದಾರೆ.

ಅರಂಬೂರು ರಾಜ್ಯ ಹೆದ್ದಾರಿ ಬದಿಯ ಸಲ್ಮಾ ಚಿಕನ್ ಸೆಂಟರಿನಿಂದ ರೂ. 5 ಸಾವಿರ ನಗದು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.


ಬೆಳಗ್ಗೆ ಅಂಗಡಿ ಬಾಗಿಲು ತೆರಯಲು ಬಂದ ವೇಳೆಯಲ್ಲಿ ವಿಷಯ ತಿಳಿದುಅಂಗಡಿ ಮಾಲೀಕರು ಸುಳ್ಯ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಸುಳ್ಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.