ವಿನೋಬನಗರ: ಬೀಗ ಮುರಿದ ಗೂಡಂಗಡಿಯಿಂದ ಕಳವು

0

ಗೂಡಂಗಡಿಯೊಂದಕ್ಕೆ ರಾತ್ರಿ ವೇಳೆ ನುಗ್ಗಿದ ಕಳ್ಳರು ಮಾರಾಟಕ್ಕಿಟ್ಟಿದ್ದ ಕೊಡೆ ಸೇರಿದಂತೆ ಅಂಗಡಿ ಸಾಮಾಗ್ರಿಗಳನ್ನು ಕಳವುಗೈದ ಘಟನೆ ಜಾಲ್ಸೂರು ಗ್ರಾಮದ ವಿನೋಬನಗರದದಲ್ಲಿ ಜು.15ರಂದು ರಾತ್ರಿ ಸಂಭವಿಸಿದೆ.

ಕೋನಡ್ಕ ಪದವಿನ ಸುಂದರ್ ನಾಯಕ್ ಅವರು ವಿನೋಬನಗರದದಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದು, ಅವರ ಅಂಗಡಿಗೆ ರಾತ್ರಿ ವೇಳೆ ಬೀಗ ಮುರಿದು ನುಗ್ಗಿದ ಕಳ್ಳರು , ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ನಾಲ್ಕು ಕೊಡೆ, ವಿಮಲ್, ಮಧು, ಚೈನಿ ಪ್ಯಾಕೇಟುಗಳು ಸೇರಿದಂತೆ ಅಂಗಡಿ ಸಾಮಾಗ್ರಿಗಳನ್ನು ಕಳವುಗೈದಿದ್ದು, ಸುಮಾರು ಐದು ಸಾವಿರದಷ್ಟು ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಈ ಕುರಿತು ಅಂಗಡಿ ಮಾಲಕ ಸುಂದರ ನಾಯಕ್ ಅವರು ಜು.16ರಂದು ಸುಳ್ಯ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.