ಸಂಪಾಜೆ: ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಲಂಚ, ಭ್ರಷ್ಟಾಚಾರ ವಿರುದ್ಧ ಫಲಕ ಸ್ವೀಕಾರ

0


ಕೊಡಗು ಸಂಪಾಜೆಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ಜು. ೨೭ರಂದು ನಡೆಯಿತು. ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣರವರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಸುದ್ದಿ ಜನಾಂದೋಲನ ವೇದಿಕೆಯ ಲಂಚ, ಭ್ರಷ್ಠಾಚಾರ ವಿರೋಧಿ, ಮತದಾರರ ಜಾಗೃತಿ ಫಲಕವನ್ನು ಶಾಸಕರಿಗೆ ನೀಡಲಾಯಿತು.


ಈ ಸಂದರ್ಭದಲ್ಲಿ ಸುದ್ದಿ ಪತ್ರಿಕೆ ವರದಿಗಾರ ಕೃಷ್ಣ ಬೆಟ್ಟ, ಸುದ್ದಿ ಪ್ರತಿನಿಧಿ ಗೋಪಾಲ, ಅರಂತೋಡು ಪ್ರತಿನಿಧಿ ತಾಜುದ್ದೀನ್, ಚೆಂಬು ಪ್ರತಿನಿಧಿ ರಮೇಶ್ ನಂಬಿಯಾರ್ ಉಪಸ್ಥಿತರಿದ್ದರು.