ಕೂಟೇಲು; ನೇಣು ಬಿಗಿದು ಆತ್ಮಹತ್ಯೆ

0

ಅಮರಮುಡ್ನೂರು ಗ್ರಾಮದ ಕೂಟೇಲು ಸಿ.ಆರ್.ಸಿ. ಕಾಲೋನಿಯ ನಟರಾಜನ್ ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಅವರಿಗೆ ಸುಮಾರು 60ವರ್ಷ ವಯಸ್ಸಾಗಿತ್ತು.

ನಿನ್ನೆ ಸಂಜೆವರೆಗೂ ದುಗ್ಗಲಡ್ಕದಲ್ಲಿ ಎಂದಿನಂತೆ ಇದ್ದ ನಟರಾಜನ್ ರವರು ಮನೆಗೆ ಹೋಗಿ ಆ ಬಳಿಕ ಮನೆಯಿಂದ ಹೊರಹೋದರೆನ್ನಲಾಗಿದೆ. ಇಂದು ಬೆಳಿಗ್ಗೆ ಅವರ ಮೃತ ದೇಹ ಕೊಡೆಂಚಡ್ಕದಲ್ಲಿರುವ ಕೆ‌.ಎಫ್.ಡಿ.ಸಿ.ಹಾಲು ಶೇಖರಣಾ ಶೆಡ್ ನಲ್ಲಿ ಕಂಡು ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.ಮೃತರು ಪತ್ನಿ ರಾಜಮಣಿ, ಪುತ್ರ ರಾದ ಶಿವಕುಮಾರ್ ಮತ್ತು ಸುಂದರಪಾಂಡಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಮೃತ ದೇಹವನ್ನು ಸರಕಾರಿ ಆಸ್ಪತ್ರೆಗೆ ತರಲಾಗಿದೆ.