ಬೆಳ್ಳಾರೆ ಗೃಹ ರಕ್ಷಕ ಘಟಕದ ಹಿರಿಯ ಗೃಹರಕ್ಷಕ ಹೂವಪ್ಪ ಗೌಡರಿಗೆ ಸುಬ್ರಹ್ಮಣ್ಯದಲ್ಲಿ ಶ್ರದ್ಧಾಂಜಲಿ ಸಭೆ

0

ಜು. 25ರಂದು ನಿಧನರಾದ ಮುಖ್ಯ ಮಂತ್ರಿಗಳ ಚಿನ್ನದ ಪದಕ ಪುರಸ್ಕೃತ ಬೆಳ್ಳಾರೆ ಗೃಹರಕ್ಷಕ ಘಟಕದ ಹಿರಿಯ ಗೃಹರಕ್ಷಕ ಕೇನ್ಯ ಗ್ರಾಮದ ಕಣ್ಕಲ್ ಹೂವಪ್ಪ ಗೌಡರಿಗೆ ಅವರ ಕುಟುಂಬದ ವತಿಯಿಂದ ಶ್ರದ್ಧಾಂಜಲಿ ಸಭೆ ಆ. 10ರಂದು ಸುಬ್ರಹ್ಮಣ್ಯದಲ್ಲಿ ನಡೆಯಿತು.

ಮೃತರ ಪತ್ನಿ ಶ್ರೀಮತಿ ಲೀಲಾವತಿ, ಪುತ್ರ ಪುತ್ತೂರು ಮೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಉದ್ಯೋಗಿಯಾಗಿರುವ ಸಚಿನ್ ಕಣ್ಕಲ್, ಪುತ್ರಿಯರಾದ ಮಂಡ್ಯದಲ್ಲಿ ಶ್ರೀ ಕ್ಷೇತ್ರ ಧ.ಗ್ರಾ.ಯೋ.ಕಚೇರಿಯಲ್ಲಿ ವ್ಯವಸ್ಥಾಪಕಿಯಾಗಿರುವ ಶ್ರೀಮತಿ ರೂಪಾ ವಿನೋದ್ ವಿರಾಜಪೇಟೆ, ಶ್ರೀಮತಿ ಶಿಲ್ಪಾ ಚಂದ್ರಶೇಖರ್ ಅಡ್ಡತೋಡು ಸೇರಿದಂತೆ

ಮೃತರ ಕುಟುಂಬಸ್ಥರು, ಬಂಧುಗಳು, ಗೃಹರಕ್ಷಕ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.