ಕೆವಿಜಿ ಐಪಿಎಸ್ ನ ಮಕ್ಕಳ ಕೆಸರುಗದ್ದೆ ಹಬ್ಬ

0

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಮಕ್ಕಳಿಗೆ ಮರ್ಕಂಜದ ಮಂಜುನಾಥ ಆಚಾರ್ ಇವರ ಗದ್ದೆಯಲ್ಲಿ ಅ.11 ರಂದು ಕೆಸರುಗದ್ದೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ಆರಂಭಿಸಲಾಯಿತು. ಬಳಿಕ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ವೇದಿಕೆಯಲ್ಲಿದ್ದ ಗಣ್ಯರಾದ ಹರಿಪ್ರಸಾದ್ ಪನ್ನೆ ಮತ್ತು ವಿಶ್ವವಾಣಿ ಪತ್ರಿಕೆಯ ಉಪಸಂಪಾದಕಿ ಭವ್ಯ ಬೊಳ್ಳೂರು ದೀಪವನ್ನು ಬೆಳಗಿಸಿ, ಹಿಂಗಾರವನ್ನು ಅರಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ, ಗದ್ದೆಗೆ ಇಳಿದು ನಾಟಿ ಮಾಡುವುದು ಹೇಗೆ ಎಂಬುದಾಗಿ ತಿಳಿಸಿ ಕೊಟ್ಟರು .

ಬಳಿಕ 10ನೇ ತರಗತಿಯ ವಂಶಿ ಪಿ.ಎಂ ‘ ಕೆಸರುಗದ್ದೆಯಲ್ಲಿ ಆಟವಾಡುವುದರಿಂದ ಚರ್ಮರೋಗಗಳು ದೂರವಾಗಿ ಆರೋಗ್ಯ ವೃದ್ದಿಯಾಗುತ್ತದೆ ‘ ಎಂಬ ವೈಜ್ಞಾನಿಕ ಕಾರಣದ ಬಗ್ಗೆ ತಿಳಿಸಿದಳು. ಆಮೇಲೆ ಮಾತನಾಡಿದ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ‘ ಕೆಸರುಗದ್ದೆ ಆಟದಿಂದ ಉಂಟಾಗುವ ಆರೋಗ್ಯ ವೃದ್ಧಿಯ ಬಗ್ಗೆ ಮತ್ತು ಅದರಿಂದ ವಿದ್ಯಾರ್ಥಿಗಳಿಗೆ ಆಗುವ ಮನೋರಂಜನೆಯ ಕುರಿತು ತಿಳಿಸಿದರು.

ಮಕ್ಕಳ ಸಂತೋಷಕ್ಕೆ ಗದ್ದೆಯನ್ನು ಕಲ್ಪಿಸಿಕೊಟ್ಟ ಮಂಜುನಾಥ್ ಆಚಾರ್ ರವರ ಮಗ ಹರಿಪ್ರಸಾದ್ ಪನ್ನೆ ಇವರಿಗೆ ಗೌರವಾರ್ಪಣೆಯನ್ನು ಮಾಡಲಾಯಿತು. ಬಳಿಕ ಭವ್ಯ ಬೊಳ್ಳೂರು ಇವರಿಗೆ ಸ್ಮರಣಿಕೆಯನಿತ್ತು ಗೌರವಿಸಲಾಯಿತು. ಆಮೇಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಸುಗ್ಗಿ ಹಾಡು ನೃತ್ಯವನ್ನು ಮಾಡಿ ಮನರಂಜಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ವೃಂದದವರಿಗೆ ಹಲವಾರು ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು .ಈ ಕಾರ್ಯಕ್ರಮವನ್ನು ಹತ್ತನೇ ತರಗತಿಯ ತನ್ವಿ ಜೆ ನಾಯಕ್ ಮತ್ತು ಮನ್ವಿತ್ ನಿರೂಪಿಸಿದರು. ಅದ್ವೈತ್ ಸ್ವಾಗತಿಸಿ ಅರುಂಧತಿ ವಂದಿಸಿದಳು.

ಈ ಕಾರ್ಯಕ್ರಮಕ್ಕೆ ಹಿಮಕರ ಬೂಡು ಮತ್ತುನವೀನ ನಳಿಯಾರ ಊಟದ ವ್ಯವಸ್ಥೆಯನ್ನು, ಹರೀಶ ಕಂಜಿಪಿಲಿ, ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ದೋಳ ಮತ್ತು ಶಿಕ್ಷಕಿ ಶ್ರೀಮತಿ ಅನಿತಾ ಇವರು ಸಿಹಿ ತಿಂಡಿ ವಿತರಣೆ ಮಾಡಿದರು . ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರವೃಂದದವರು, ಊರಿನ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.