ಓಡಬಾಯಿ ರಾಜ್ಯ ಹೆದ್ದಾರಿ ರಸ್ತೆ ಬದಿ ಹೆಚ್.ಟಿ ವಿದ್ಯುತ್ ತಂತಿಯನ್ನು ಆವರಿಸಿಕೊಂಡಿರುವ ಕಾಡು ಪೊದೆಗಳು

0

ಸುಳ್ಯ ಪುತ್ತೂರು ರಾಜ್ಯ ಹೆದ್ದಾರಿಯ ಓಡಬಾಯಿ ಬಳಿ ರಸ್ತೆಯ ಬದಿಯಲ್ಲಿ ಹಾದು ಹೋಗುವ ವಿದ್ಯುತ್ ಹೆಚ್. ಟಿ ಲೈನ್ ತಂತಿಗಳ ಮೇಲೆ ಕಾಡು ಪೊದೆಗಳು ಆವರಿಸಿಕೊಂಡು ಅನಾಹುತಕ್ಕೆ ಆಹ್ವಾನ ನೀಡುವಂತಿದೆ.

ಈ ರಸ್ತೆಯ ಮೂಲಕ ಮೆಸ್ಕಾಂ ಇಲಾಖೆಯವರು ದಿನ ನಿತ್ಯ ಓಡಾಡುತ್ತಿದ್ದಾರೆ.

ಕಣ್ಣಿದ್ದು ಕುರುಡರಂತೆ ಸಂಚರಿಸುತ್ತಿರುವ ಇಲಾಖೆಯವರು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗದಿರುವುದು ನಿರ್ಲಕ್ಷ್ಯತೆಗೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಇನ್ನಾದರೂ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಅಪಾಯ ಸಂಭವಿಸುವ ಮುಂಚಿತವಾಗಿ ಕಾರ್ಯಪ್ರವೃತ್ತರಾದರೆ ಅನಾಹುತ ತಪ್ಪಿಸಬಹುದು ಎಂಬುದು ಸ್ಥಳೀಯರ ಆಗ್ರಹವಾಗಿದೆ.