ಸುಳ್ಯ ಎಸ್.ವೈ.ಎಸ್ ವತಿಯಿಂದ ರಾಷ್ಟ್ರ ರಕ್ಷಾ ಸಂಗಮದ ಪೋಸ್ಟರ್ ಬಿಡುಗಡೆ

0

ದಕ್ಷಿಣ ಕನ್ನಡ ಜಿಲ್ಲೆ ಸುನ್ನಿ ಯುವಜನ ಸಂಘದ ವತಿಯಿಂದ ಆಗಸ್ಟ್ 15 ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆಯುವ ಜಿಲ್ಲಾ ರಾಷ್ಟ್ರ ರಕ್ಷಾ ಸಂಗಮದ ಕಾರ್ಯಕ್ರಮದ ಪೋಸ್ಟರ್ ನ್ನು ಆಗಸ್ಟ್ 11 ರಂದು ಸುಳ್ಯದ ಸುನ್ನಿಮಹಲ್ ನಲ್ಲಿ ಎಸ್.ವೈ.ಎಸ್ ವಲಯ ಅಧ್ಯಕ್ಷರು ಹಾಜಿ ಇಬ್ರಾಹಿಂ ಕತ್ತರ್ ಬಿಡುಗಡೆಗೊಳಿಸಿದರು.

ಶಾಫಿ ದಾರಿಮಿ ಅಜ್ಜಾವರ ದುವಾ ನೆರೆವೇರಿಸಿದರ. ತಾಲೂಕು ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಹಾಜಿ ಹಮೀದ್, ತಾಜ್ ಮೊಹಮ್ಮದ್ ಸಂಪಾಜೆ, ಜಮಿಯುತ್ತುಲ್ ಪೌಲಾದ್ ಅಧ್ಯಕ್ಷ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಅಕ್ಬರ್ ಕರಾವಳಿ, ಹಾಜಿ ಅಹಮ್ಮದ್ ಸುಪ್ರಿಮ್, ಅಹಮ್ಮದ್ ಶಿಲ್ಪಾ ಅಬೂಬಕ್ಕರ್ ಬನ್ನೂರ್, ಅಬ್ದುಲ್ ರಜಾಕ್, ಹಾರೀಸ್ ಉಪಸ್ಥಿತರಿದ್ದರು.

ಎಸ್.ವೈ.ಎಸ್ ನಗರ ಕಾರ್ಯದರ್ಶಿ ಅಮೀರ್ ಕುಕ್ಕುಂಬಳ ಸ್ವಾಗತಿಸಿ ವಂಧಿಸಿದರು.