ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

0

ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರಿಂದ ಸ್ವಾತಂತ್ರ್ಯೋತ್ಸವ ಆಚರಣೆ ಇಂದು ನಡೆಯಿತು. ದ್ವಜಾರೋಹಣವನ್ನು ಮಾಜಿ ಸೈನಿಕ ಲೋಕೇಶ್ ಪಿ ಇರಂತಮಜಲು ನೆರವೇರಿಸಿದರು.ಈ ಕಾರ್ಯಕ್ರಮದಲ್ಲಿ ರಿಕ್ಷಾ ಸಂಘದ ಸ್ಥಾಪಕಾಧ್ಯಕ್ಷ ಪಿ ಗೋಪಾಲಕೃಷ್ಣ ಭಟ್ ,

ಕಾನೂನು ಸಲಹೆಗಾರರಾದ ಪಿ ಭಾಸ್ಕರ್ ರಾವ್, ರಿಕ್ಷಾ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಮಾಜಿ ಅಧ್ಯಕ್ಷ ವಿಜಯಕುಮರ್ ಉಬರಡ್ಕ ,ಹಾಗೂ ಕಾರ್ಯಕಾರಿಣಿ ಪದಾಧಿಕಾರಿಗಳು, ಸದಸ್ಯರು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾತಂತ್ರ್ಯ ಗೀತೆಯನ್ನು ನಾಗರಾಜ್ ಮುಳ್ಯ ಹಾಡಿದರು.

ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು. ಶಿವಕೃಪಾ ಕಲಾಮಂದಿರದ ವೆಂಕಟೇಶ್ ಭಟ್ ಸಿಹಿತಿಂಡಿ ನೀಡಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಗೋಪಾಲ ಅಡ್ಕಾರ್ ಹಾಗೂ ಕರುಣಾಕರ ಕಾಡುಸೊರಂಜ ಮುಂತಾದ ಗಣ್ಯರು ಭಾಗವಹಿಸಿದ್ದರು. ವಾಸುದೇವ ಜಯನಗರ,

ನಾರಾಯಣ ಶಾಂತಿನಗರ, ರವಿ ಜಾಲ್ಸೂರು ಮೋಹನ್ ಮಾಂಗಲ್ಯ ಚೋಕ್ಕಾಡಿ, ನಮ್ಮ ಸಂಘದ ಸದಸ್ಯ ಆಟೋ ರಿಕ್ಷಾ ಚಾಲಕರು ಕಾರ್ಯಕ್ರಮಕ್ಕೆ ಸಹಕರಿಸಿದರು. ಬಳಿಕ ಸುಳ್ಯ ನಗರದಲ್ಲಿ ಆಟೋರಿಕ್ಷಾ ಮೆರವಣಿಗೆ ನಡೆಸಲಾಯಿತು.