ಕನಕಮಜಲಿನ ಕಳವು ಪ್ರಕರಣ : ಆದಷ್ಟು ಬೇಗನೆ ಕಳ್ಳರ ಪತ್ತೆ ಹಚ್ಚಲು ಮನವಿ

0

ಕನಕಮಜಲು ಗ್ರಾಮದ ಬುಡ್ಲೆಗುತ್ತು ಯುರೇಶ್ ರವರ ಮನೆಯಲ್ಲಿ ಕಳವು ನಡೆದು ಸುಮಾರು ಒಂದು ತಿಂಗಳಾದರೂ ಕಳ್ಳರ ಪತ್ತೆಯಾಗಲಿಲ್ಲವಾದರಿಂದ ಆದಷ್ಟು ಶೀಘ್ರ ಕಳ್ಳರನ್ನು ಪತ್ತೆ ಪಡುವಂತೆ ಉಸ್ತವಾರಿ ಸಚಿವ ದಿನೇಶ್ ಗಂಡೂರಾವ್ ಹಾಗೂ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ರವರ ಜತೆ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರಾದ ಕಿರಣ್ ಬುಡ್ಲೆಗುತ್ತು ಹಾಗೂ ಎನ್ ಎಸ್ ಯು ಐ ಮುಖಂಡರಾದ ಕೀರ್ತನ್ ಕೊಡಪಾಲ ರವರು ಒತ್ತಾಯಿಸಿದರು.

ಸಚಿವರು ಎಸ್.ಪಿ‌.ಯವರಿಗೆ ದೂರವಾಣಿ ಕರೆ ಮಾಡಿ ಆದಷ್ಟು ಶೀಘ್ರ ಕಳ್ಳರನ್ನು ಹಿಡಿಯಬೇಕೇಂದು ಸೂಚಿಸಿದರೆಂದು ತಿಳಿದು ಬಂದಿದೆ‌.