ಅಜ್ಜಾವರ : ಉರುಳಿಗೆ ಬಿದ್ದ ಚಿರತೆ‌ ಸಾವು

0

ಜಾಗದ ಮಾಲಕರ‌ ಮೇಲೆ ಪ್ರಕರಣ ದಾಖಲು

ಅಜ್ಜಾವರ ಗ್ರಾಮದ ಪಡ್ಡಂಬೈಲು ಎಂಬಲ್ಲಿ ಉರುಳಿಗೆ ಸಿಲುಕಿ ಸುಮಾರು ಒಂದೂವರೆ ವರ್ಷ ಪ್ರಾಯದ ಹೆಣ್ಣು ಚಿರತೆ ಮರಿ ಸಾವಿಗೀಡಾಗಿದ್ದು, ಉರುಳಿಟ್ಟರೆಂಬ ಆರೋಪದಲ್ಲಿ ಜಾಗದ ಮಾಲಕರ ಮೇಲೆ ಪ್ರಕರಣ ದಾಖಲಿಸಿಕೊಂಡ‌ ಘಟನೆ ವರದಿಯಾಗಿದೆ.

ಘಟನೆಗೆ ಸಂಬಂಧಿಸಿ ಪಡ್ಡಂಬೈಲು ಜಯರಾಮ ಹಾಗೂ ಪೃಥ್ವಿ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ. ಸುಳ್ಯ ರೇಂಜರ್ ಮಂಜುನಾಥ್ ಸಹಿತ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ‌ ನೀಡಿದ್ದಾರೆ.