ಹರಿಹರೇಶ್ವರ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ ಆಚರಣೆ

0

ಕೃಷ್ಣ ಪ್ರಜ್ಞಾ ಟ್ರಸ್ಟ್ ಸುಳ್ಯ,

ಕೃಷ್ಣ ನಾಮಾಭಾವಾಮೃತ ಸಂಘ ಹರಿಹರೇಶ್ವರ ದೇವಸ್ಥಾನ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ ಆಚರಣೆ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದು ಕಾರ್ಯಕ್ರಮವನ್ನು ಶ್ರೀ ಹರಿಹರೇಶ್ವರ ದೇವಸ್ಥಾನದ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ದೀಪ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೃಷ್ಣಪ್ರಜ್ಞಾ ಟ್ರಸ್ಟ್ ಸುಳ್ಯ ನಿರ್ದೇಶಕರಾದ ಹೊನ್ನಪ್ಪ ಪೊಯ್ಯಮಜಲು, ದುಗ್ಗಪ್ಪ ಅಗ್ರಹಾರ, ಶ್ರೀ ಹರಿಹರೇಶ್ವರ ದೇವಸ್ಥಾನದ ಮ್ಯಾನೇಜರ್ ಲೋಕನಾಥ ಕಿರಿಭಾಗ, ಬಾಲಚಂದ್ರ ಕಲ್ಲೇರಿಕಟ್ಟ,

ವಿಶ್ವನಾಥ ಬಿಳಿಮಲೆ, ಉಮೇಶ್ ಕಜ್ಜೋಡಿ, ಕಿಶೋರ್ ಮುಂಡಾಜೆ, ದಿನೇಶ್ ಕಿರಿಬಾಗ, ಗಿರೀಶ್ ಹರೆಕಜೆ, ಸಾಯಿಗೀತಾ ಕೂಜುಗೋಡು,ರೇಷ್ಮಾ ಕಟ್ಟೆಮನೆ, ಚಾಮುಂಡೇಶ್ವರಿ ಭಜನಾ ತಂಡದ ಸದಸ್ಯರು ಮತ್ತಿತರರು ಹಾಜರಿದ್ದರು.

ಕೃಷ್ಣವೇಷ ಸ್ಪರ್ದೆ ಹಾಗೂ ರಾತ್ರಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.

ಕುಶಾಲಪ್ಪ ಕಾಂತುಕುಮೇರಿ