ಸುಬ್ರಹ್ಮಣ್ಯ ಆದರ್ಶ ಸೊಸೈಟಿ ಪಿಗ್ಮಿ ಕಲೆಕ್ಟರ್ ಸುಬ್ಬಯ್ಯ ಶೆಟ್ಟಿ ಚಾಲ್ಯಾರು ಕುಸಿದು ಬಿದ್ದು ಮೃತ್ಯು

0


ಸುಬ್ರಹ್ಮಣ್ಯ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಪಿಗ್ಮಿ ಕಲೆಕ್ಟರ್ ಕೇನ್ಯ ಗ್ರಾಮದ ಚಾಲ್ಯಾರು ದಿ.ಅಮ್ಮು ಶೆಟ್ಟಿ ಮತ್ತು ದಿ.ಶ್ರೀಮತಿ ಚೆನ್ನಮ್ಮ ಶೆಟ್ಟಿ ಯವರ ಪುತ್ರ ಸುಬ್ಬಯ್ಯ ಶೆಟ್ಟಿ (47ವ)
ರವರು ಸೆ.11 ರಂದು ರಾತ್ರಿ ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.

ಅವರು ರಾತ್ರಿಯಾದರು ಮನೆಗೆ ತಲುಪಿಲ್ಲವೆಂದು ಮನೆಯವರು ಹುಡುಕಲು ಹೊರಟಾಗ ದಾರಿಯಲ್ಲಿ ಕುಸಿದು ಬಿದ್ದಿದ್ದರು.

ತಕ್ಷಣ ಅವರನ್ನು
ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರು ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಮೃತ ದೇಹವನ್ನು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅವರು ಅನೇಕ ವರ್ಷಗಳಿಂದ ಸುಬ್ರಹ್ಮಣ್ಯ ಆದರ್ಶ ಸೊಸೈಟಿಯ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದು ಪಂಜ, ಸುಬ್ರಹ್ಮಣ್ಯ ಪರಿಸರದಲ್ಲಿ ಚಿರಪರಿಚಿತರಾಗಿದ್ದರು.

ಮೃತರು
ಸಹೋದರಿ ಶ್ರೀಮತಿ ಚಂದ್ರಾವತಿ, ಅಳಿಯ ಸುಮಂತ್, ಸಹೋದರಿ ಶ್ರೀಮತಿ ಶಾರದಾ ಸಹೋದರರಾದ ಜಗನ್ನಾಥ ,ಕಿಟ್ಟಣ್ಣ , ಬಾಲಕೃಷ್ಣ ,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.