ಸಂಕೇಶ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ರಹಿಮಾನ್‌ ಸಂಕೇಶ್ ರವರಿಂದ ಮರ್ಕಜ್ ನಾಲೇಜ್ ಸಿಟಿ ನಿರ್ಮಾತೃ ಎ.ಪಿ ಉಸ್ತಾದರ ಭೇಟಿ

0

ಸುಳ್ಯ ಸಂಕೇಶ್ ಫೌಂಡೇಶನ್ ಇದರ ಅಧ್ಯಕ್ಷರಾದ ಬೆಂಗಳೂರು ಉದ್ಯಮಿ ಕೊಡುಗೈದಾನಿ ಅಬ್ದುಲ್ ರಹಿಮಾನ್‌ ಸಂಕೇಶ್ ಇತ್ತೀಚೆಗೆ ಬೆಂಗಳೂರು ಕಾರ್ಯಕ್ರಮಕ್ಕೆ ಅಗಮಿಸಿದ ಮರ್ಕಜ್ ಶಿಲ್ಪಿ ಕಾಂದಪುರಂ ಎ.ಪಿ ಅಬೂಭಕ್ಕರ್ ಮುಸ್ಲಿಯಾರ್ ರವರನ್ನು ಭೇಟಿ ಮಾಡಿದರು.
ಇದೇ ಸಂದರ್ಭದಲ್ಲಿ ಮರ್ಕಜ್ ನಾಲೇಜ್ ಸಿಟಿ ವತಿಯಿಂದ ಅಬ್ದುಲ್ ರಹಿಮಾನ್‌ ಸಂಕೇಶ್ ರವರನ್ನು ಗೌರವಿಸಿದರು.
ಮರ್ಕಜ್ ಶಿಲ್ಪಿ ಎ ಪಿ ಅಬೂಭಕ್ಕರ್ ಮುಸ್ಲಿಯಾರ್ ರವರನ್ನು ಭೇಟಿ ನೀಡಿ ಅಬ್ದುಲ್ ರಹಿಮಾನ್‌ ಸಂಕೇಶ್ ರವರು ಸಂಕೇಶ್ ಫೌಂಡೇಶನ್ ವತಿಯಿಂದ ದೇಣಿಗೆ ನೀಡಿದರು.

ಮರ್ಕಜ್ ನಾಲೇಜ್ ಸಿಟಿಯಲ್ಲಿ ಆರಂಭಗೊಂಡಿರುವ ಎಲ್ಲಾ ‌ಸಾಮಾಜಿಕ ಕೆಲಸಗಳಿಗೆ ತಮ್ಮ ಸಹಕಾರ ನೀಡುವ ಭರವಸೆಯನ್ನು ನೀಡಿದರು.
ಮರ್ಕಜ್ ನಾಲೇಜ್ ಸಿಟಿ ಕರ್ನಾಟಕ ಪ್ರತಿನಿಧಿಗಳು,ಹಿತೈಷಿಗಳು ಉಪಸ್ಥಿತರಿದ್ದರು.