ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಹಾಸಭೆ

0

ಬೆಂಗಳೂರಿನಲ್ಲಿರುವ ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ 11ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸೆ.24ರಂದು ಸಹಕಾರಿಯ ಅದ್ಯಕ್ಷರಾದ ಪಾಣತಲೆ ಪಳಂಗಪ್ಪ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಲೆಗ್ಗೆರೆಯಲ್ಲಿರುವ ನಮ್ಮನೆ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ನಡೆಯಿತು.

ಸಹಕಾರಿಯು 2022-23ನೇ ಸಾಲಿನಲ್ಲಿ ಸುಮಾರು 78 ಲಕ್ಷ ರೂ. ಗಳ ನಿವ್ವಳ ಲಾಭಗಳಿಸಿದ್ದು ಷೇರುದಾರ ಸದಸ್ಯರಿಗೆ 11% ಡಿವಿಡೆಂಡ್ ಘೋಷಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಅತ್ಯುತ್ತಮ ಸಾಧನೆ ತೋರಿದ 25 ಸದಸ್ಯರ ಮಕ್ಕಳಿಗೆ ರೂ.4,000 ದಂತೆ, ಪಿಯುಸಿಯವರಿಗೆ ರೂ.5,000ದಂತೆ, ಹಾಗೂ ಸಿಇಟಿ‌ ಹಾಗೂ ನೀಟ್ ನವರಿಗೆ ರೂ.15,000/- ದಂತೆ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ/ ರಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ಪ್ರಮಾಣ ಪತ್ರದ ಜೊತೆಯಲ್ಲಿ ನಗದು ನೀಡಿ ಸನ್ಮಾನಿಸಲಾಯಿತು.