ಬೊಳುಬೈಲು: ನವಚೇತನ ಯುವಕ ಮಂಡಲ – ಜಾಲ್ಸೂರು ಗ್ರಾ.ಪಂ. ಹಾಗೂ ಸುಳ್ಯ ಯುವಜನ ಸಂಯುಕ್ತ ಮಂಡಳಿ ವತಿಯಿಂದ ಸ್ವಚ್ಛತಾ ಕಾರ್ಯ

0

ಜಾಲ್ಸೂರು ಗ್ರಾಮದ ಬೊಳುಬೈಲಿನ ನವಚೇತನ ಯುವಕಮಂಡಲ, ಜಾಲ್ಸೂರು ಗ್ರಾಮ ಪಂಚಾಯತ್ ಸುಳ್ಯದ ಯುವಜನಸಂಯುಕ್ತ ಮಂಡಳಿ ಇವುಗಳ ವತಿಯಿಂದ ಗಾಂಧಿಜಯಂತಿಯ ಪ್ರಯುಕ್ತ ಜಾಲ್ಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸ್ಸುತಂಗುದಾಣಗಳ ಮತ್ತು ರಸ್ತೆ ಸೂಚನೆ ಫಲಕಗಳ ಸ್ವಚ್ಚತಾ ಕಾರ್ಯಕ್ರಮವು ಅ.1ರಂದು ನಡೆಯಿತು.

ಸ್ವಚ್ಛತಾ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತಿರುಮಲೆಶ್ವರಿ ಮರಸಂಕ, ಉಪಾಧ್ಯಕ್ಷೆ ಶ್ರೀಮತಿ ತಿರುಮಲೆಶ್ವರಿ ಆರ್ಭಡ್ಕ , ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುಬ್ಬಯ್ಯ, ಯುವಜನ ಸಂಯುಕ್ತ ಮಂಡಳಿಯ ಕಾರ್ಯದರ್ಶಿ ಗುರುರಾಜ್ ಅಜ್ಜಾವರ ಭೇಟಿ ನೀಡಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಯುವಕಮಂಡಲದ ಅಧ್ಯಕ್ಷರು,ಕಾರ್ಯದರ್ಶಿ, ಪೂರ್ವಧ್ಯಕ್ಷರುಗಳು,ಸದಸ್ಯರು, ಪದಾಧಿಕಾರಿಗಳು,
ಮತ್ತು ನವಚೇತನ ಚಿಣ್ಣರಕೂಟದ ಸದಸ್ಯರು ಉಪಸ್ಥಿತರಿದ್ದರು.

ಸ್ವಚ್ಛತಾ ಕಾರ್ಯಕ್ಕೆ ವಾಹನದ ವ್ಯವಸ್ಥೆಯಲ್ಲಿ ಯುವಕ ಮಂಡಲದ ಪೂರ್ವಧ್ಯಕ್ಷರುಗಳಾದ ವೆಂಕಪ್ಪ ನೆಕ್ರಾಜೆ,ಚಂದ್ರಶೇಖರ ನೆಕ್ರಾಜೆ ಸಹಕರಿಸಿದರು.
ಪ್ರೆಸೆರ್ ಮೆಷಿನ್ ನಿತಿನ್ ಆರ್ಭಡ್ಕ ,ಕಳೆಕೊಚ್ಚುವ ಯಂತ್ರವನ್ನು ದಯಾನಂದ ಪಿಲಿಕೋಡಿ ,ಭೋಜನ ತಯಾರಿ ಯಲ್ಲಿ ಪೂರ್ವಧ್ಯಕ್ಷ ವಿಶ್ವನಾಥ ಆರ್ಭಡ್ಕ.ಬೆಳಗ್ಗೆಯ ಉಪಾಹಾರವನ್ಮು ಗ್ರಾಮಪಂಚಾಯತ್ ವತಿಯಿಂದ ನೀಡಿ ಸಹಕರಿಸಿದರು.