ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.ವಿ ಸದಾನಂದ ಗೌಡರಿಂದ ಸರ್ಪ ಸಂಸ್ಕಾರ

0

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರು ಕುಟುಂಬ ಸಮೇತ ಬಂದು ಸರ್ಪ ಸಂಸ್ಕಾರ ಸೇವೆ ಮಾಡಿಸಿರುವುದಾಗಿ ತಿಳಿದು ಬಂದಿದೆ.

ನ.1 ರಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಅವರು, ಸರ್ಪ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ. ಆಶ್ಲೇಷ ಬಲಿ ಪೂಜೆ, ಮಹಾಭಿಷೇಕ, ನಾಗ ಪ್ರತಿಷ್ಠೆ ಸೇವೆ ಮಾಡಿಸಿದ್ದಾರೆ. ಡಿ.ವಿ ಯವರ ಪತ್ನಿ ಡಾಟಿ, ಮಗ ಕಾರ್ತಿಕ್, ಮಗನ ಪತ್ನಿ, ಮತ್ತವರ ಪತ್ನಿಯ ಅಪ್ಪ-ಅಮ್ಮ ಜೊತೆಗಿದ್ದರು. ಎಂದು ತಿಳಿದು ಬಂದಿದೆ. ನ.3 ರಂದು ದೇವಸ್ಥಾನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಗಿಡ ನೆಟ್ಟಿದ್ದಾರೆ.

ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಸದಸ್ಯರಾದ ಶೋಭಾ ಗಿರಿಧರ್, ವನಜಾ ಭಟ್ , ದೇವಸ್ಥಾನದ ಸಿಬ್ಬಂದಿ ನವೀನ್ ಮತ್ತಿತರರು ಉಪಸ್ಥಿತರಿದ್ದರು