ಕಾಂತಮಂಗಲ : ನವಜೀವನ ಸದಸ್ಯರಿಗೆ ಸ್ವಾಗತ ಕಾರ್ಯಕ್ರಮ

0

ಅಜ್ಜಾವರದಲ್ಲಿ ಇತ್ತೀಚೆಗೆ ನಡೆದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮದ್ಯಮುಕ್ತರಾದ ನವಜೀವನ ಸದಸ್ಯರ ಸ್ವಾಗತ ಕಾರ್ಯಕ್ರಮ ನ.12 ರಂದು ಕಾಂತಮಂಗಲ ಶಾಲಾ ವೇದಿಕೆಯಲ್ಲಿ ನಡೆಯಿತು.

ನವಜೀವನ ಸದಸ್ಯರನ್ನು ಆರತಿ ಬೆಳಗಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ವಲಯದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ಒಕ್ಕೂಟದ ಅಧ್ಯಕ್ಷ ರಾದ ಸತೀಶ್ ಅತ್ಯಡ್ಕ, ರಮೇಶ್ ಮುಳ್ಯ, ಪ್ರವೀಣ್ ಪೇರಾಲು, ಸೇವಾ ಪ್ರತಿನಿಧಿಗಳಾದ ಶ್ರೀಮತಿ ಸೌಮ್ಯ, ಶ್ರೀಮತಿ ಭಾರತಿ, ಶ್ರೀಮತಿ ಉಷಾ ಹಾಗೂ ನವಜೀವನ ಸಮಿತಿ ಅಧ್ಯಕ್ಷರಾದ ಆನಂದ ಅಡ್ಪಂಗಾಯ, ಸುಬ್ಬ ಪಾಟಾಳಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯದರ್ಶಿ ಸರಿತಾ ಸ್ವಾಗತಿಸಿ, ಸೌಮ್ಯ ವಂದಿಸಿದರು.