ಸುಳ್ಯದಲ್ಲಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರಿ ಸಂಘದ ಪೂರ್ವಭಾವಿ ಸಭೆ

0

ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಕರ್ನಾಟಕ ದಕ್ಷಿಣಕನ್ನಡ ಜಿಲ್ಲೆ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರಿ ಸಂಘ ನಿ.ಇದರ ಪೂರ್ವ ಭಾವಿ ಸಭೆ ಮೇನಾಲ ಅಂಬೇಡ್ಕರ್ ಭವನದಲ್ಲಿ ಮನೋಹರ ಪಲ್ಲತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ನ.27 ರಂದು ನಡೆಯಿತು. ಅಂಬೇಡ್ಕರ್ ವಿವಿಧೋದ್ದೇಶ ಸಹಕಾರಿ ಸಂಘ ನಿ.ಇದರ ಸಂಸ್ಥಾಪಕರಾದ ತುಂಬಲ ರಾಮಣ್ಣ ಸಂಘದ ರೂಪರೇಷೆಗಳ ಬಗ್ಗೆ ಮಾಹಿತಿ ನೀಡಿ ರಾಜ್ಯಾಧ್ಯಂತ 27 ಶಾಖೆ ಆರಂಭವಾಗಿದೆ ಇದರ ಸದುಪಯೋಗವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರು ಪಡೆದುಕೊಳ್ಳಿ ಸುಳ್ಯ ತಾಲೂಕಿನಲ್ಲಿ ಕೂಡ ಶಾಖೆ ತೆರೆದು ಸಮುದಾಯದ ಏಳಿಗೆಗೆ ಶ್ರಮ ವಹಿಸಿ ಈ ಸಂದರ್ಭದಲ್ಲಿ ಪ್ರಸ್ತಾವಿಕ ಮಾತನಾಡಿದರು.

ಕೋಲಾರ ಶಾಖೆಯ ಸಿದ್ಧಾರ್ಥ್ ಆನಂದ ಮಾಲೂರು,ಕನಕಪುರ ಶಾಖೆಯ ಸಿಂಡಿಕೇಟ್ ಶಿವಣ್ಣ,ಪಿರಿಯಪಟ್ಣ ಶಾಖೆಯ ಐಲಪುರ ರಾಮು,ಕುಶಾಲನಗರ ಶಾಖೆಯ ಗಣೇಶ, ಆದಿದ್ರಾವಿಡ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಡಿ.ಪಿ.ದೊಡ್ಡೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಗೆ ಹರೀಶ್ ಮೇನಾಲ,ಸುಂದರ ಬಾಡೇಲು, ಪ್ರಕಾಶ್ ಕಲ್ಲಗುಡ್ಡೆ, ಮಧುಸೂದನ್ ಕಾಟಿಪಳ್ಳ ಸಂಪೂರ್ಣ ಸಹಕಾರ ನೀಡಿದರು. ಸಭೆಯಲ್ಲಿ ಐವತ್ತು ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪಂಗಡದವರು ಭಾಗವಹಿಸಿದರು. ಸಭೆಯ ನಂತರ ಸಾರ್ವಜನಿಕರಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಯಿತು. ಸತೀಶ್ ಬೂಡುಮಕ್ಕಿ ಸ್ವಾಗತಿಸಿದರು.ಚಂದ್ರಶೇಖರ ಕೆ ಪಲ್ಲತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.