ಕುಕ್ಕೆ ಸುಬ್ರಹ್ಮಣ್ಯ ಷಷ್ಠಿಯಲ್ಲಿ ಕೃಷಿ ಮೇಳ

0

 ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವದ  ಪ್ರಯುಕ್ತ ದೇವಸ್ಥಾನದ ವತಿಯಿಂದ  ಕೃಷಿಮೇಳವನ್ನು ಆಯೋಜಿಸಲಾಗಿತ್ತು.   ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮನೋಹರ ರೈ ಕೃಷಿ ಮೇಳವನ್ನು ಡಿ.17 ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ರಾಮ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಒ ರಾಜಣ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ ಮನೋಹರ ರೈ, ಶೋಭಾ ಗಿರಿಧರ್,ಪಿ.ಜಿ.ಎಸ್.ಎನ್.ಪ್ರಸಾದ್, ವನಜಾ.ವಿ.ಭಟ್ ಕೃಷಿ ಮೇಳದ ಸಂಯೋಜಕ ನೋಣಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು. ಮೇಳದಲ್ಲಿ ಕೃಷಿ ಆಧಾರಿತ ಕೃಷಿ ಉಪಕರಣಗಳ ಪ್ರಾತ್ಯಕ್ಷಿಕೆ, ನರ್ಸರಿ ಗಿಡಗಳು, ತರಕಾರಿ ಬೀಜ, ಕೃಷಿಗೆ ಬೇಕಾಗುವ ಗೊಬ್ಬರಗಳ ಮಾಹಿತಿ, ವಿವಿಧ ತಳಿಗಳ ಕೃಷಿ ಬೆಳೆಗಳ ಮಾಹಿತಿ ನೀಡುವ ಸ್ಟಾಲ್ ಗಳಿದ್ದವು.