ಪರಿವಾರಕಾನ: ಅನಾರೋಗ್ಯ ಪೀಡಿತ ಮಹಿಳೆಗೆ ಸುರಕ್ಷಾ ಯೋಜನೆಯಿಂದರೂ. 30 ಸಾವಿರದ ಚೆಕ್ ಹಸ್ತಾಂತರ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ವಲಯದ ಪರಿವಾರಕಾನ ಒಕ್ಕೂಟದ ಶ್ರೀ ವಿಷ್ಣು ಸ್ವಸಹಾಯ ಸಂಘದ ಸದಸ್ಯೆ ಭವಾನಿಪ್ರಸಾದ್ ರವರ ತಾಯಿಯು ಅನಾರೋಗ್ಯದಿಂದಿದ್ದು ಅವರಿಗೆ ಸಂಪೂರ್ಣ ಸುರಕ್ಷಾಯೋಜನೆಯಡಿಯಲ್ಲಿ ಮಂಜೂರಾದ ರೂ. 30 ಸಾವಿರದ ಚೆಕ್ಕನ್ನು ಇಂದು ಯೋಜನಾ ಕಚೇರಿಯಲ್ಲಿ ಕಚೇರಿ ಪ್ರಬಂಧಕ ಆತೀಶ್ ರವರು ವಿತರಿಸಿದರು.

ಈ ಸಂದರ್ಭದಲ್ಲಿ ಸುಳ್ಯ ವಲಯ ಮೇಲ್ವಿಚಾರಕಿ ಪ್ರಿಯಾ ಹಾಗೂ ಪರಿವಾರಕಾನ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸುರೇಶ್ ಪರಿವಾರಕಾನ ಮತ್ತು ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.