p>

ಕನಕಮಜಲು: ಅಯ್ಯಪ್ಪ ವೃತಧಾರಿಗಳಿಂದ ಶ್ರೀಕ್ಷೇತ್ರ ಶಬರಿಮಲೆಗೆ ಪಾದಯಾತ್ರೆ

0

ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಿಂದ ಅಯ್ಯಪ್ಪ ಸ್ವಾಮಿ ವೃತಧಾರಿಗಳ ತಂಡ ಡಿ.21ರಂದು ಶ್ರೀಕ್ಷೇತ್ರ ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಪಾದಯಾತ್ರೆ ಕೈಗೊಂಡರು.

ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ಕೃಷ್ಣ ಗುರುಸ್ವಾಮಿ ಹಾಗೂ ಚಂದ್ರಶೇಖರ ಗುರುಸ್ವಾಮಿ ಅವರ ನೇತೃತ್ವದಲ್ಲಿ ಇರುಮಡಿ ಕಟ್ಟು ಕಟ್ಟಿದ ಶಿವಪ್ರಸಾದ್ ಅಡ್ಕಾರುಪದವು, ಅಶೋಕ ನೆಡಿಲು, ಗಿರೀಶ್ ಮರಸಂಕ, ರಂಜಿತ್ ಬೆಳ್ಳಿಪ್ಪಾಡಿ, ಮಹೇಶ್ ಅಗೋಳ್ತೆ, ಕಿಶೋರ್ ಕೂಂದ್ರುಕೋಡಿ, ಚಿತ್ರೇಶ್ ಪೇರಾಲು ಹಾಗೂ ಅಡ್ಕಾರು ಶ್ರೀ ಅಯ್ಯಪ್ಪ ಮಂದಿರದಲ್ಲಿ ಚಂದ್ರಶೇಖರ ಗುರುಸ್ವಾಮಿ ಅವರ ನೇತೃತ್ವದಲ್ಲಿ ಇರುಮುಡಿ ಕಟ್ಟು ಕಟ್ಟಿದ ಎ.ಆರ್. ಬಾಬು ಅಡ್ಕಾರು ಸೇರಿದಂತೆ ಎಂಟು ಮಂದಿಯ ತಂಡ ಡಿ.21ರಂದು ಪಾದಯಾತ್ರೆ ಕೈಗೊಂಡಿದ್ದಾರೆ. ಈ ತಂಡವು ಮಕರಜ್ಯೋತಿ ದರ್ಶನದ ಬಳಿಕ ಊರಿಗೆ ಮರಳಲಿದ್ದಾರೆ.