p>

ಉಬರಡ್ಕ : ಭಾರತ ವಿಕಸಿತ ಸಂಕಲ್ಪ ಯಾತ್ರೆ ಕಾರ್ಯಕ್ರಮ

0

ಗ್ರಾಮ ಪಂಚಾಯತ್ ಉಬರಡ್ಕ ಮಿತ್ತೂರು ವತಿಯಿಂದ ಭಾರತ ವಿಕಸಿತ ಸಂಕಲ್ಪ ಯಾತ್ರೆ ಕಾರ್ಯಕ್ರಮವು ಡಿ.30 ರಂದು ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂದೀಶ ರೆಡ್ಡಿ, ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ, ಜಿ.ಪಂ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಉಪಸ್ಥಿತರಿದ್ದರು.

ಸಂಕಲ್ಪ ವಿಕಸಿತ ಭಾರತ ರಥದ ಆಗಮನ, ಸಂಕಲ್ಪ ರಥದ ಸ್ವಾಗತವನ್ನು ಬರಮಾಡಿಕೊಂಡು ವೀಡಿಯೋ ಪ್ಲೇ ಮಾಡಲಾಯಿತು. ಕಾಯ೯ಕ್ರಮ ದಲ್ಲಿ ಕ್ರೀಡೆ, ಕೃಷಿ, ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.

ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು, ಪಿಡಿಒ ರವಿಚಂದ್ರ, ಗ್ರಾ.ಪಂ ಸದಸ್ಯ ಹರೀಶ್ ರೈ ಉಬರಡ್ಕ, ಪ್ರಶಾಂತ್ ಪಾನತ್ತಿಲ, ಮಮತಾ ಕುದ್ಪಾಜೆ, ಹಾಗೂ ಶ್ಯಾಮ್ ಪಾನತ್ತಿಲ, ಶಶಿಧರ ನಾಯರ್, ಅಪ್ಪಯ್ಯ ಸೂಂತೋಡು , ಗ್ರಾ.ಪಂ. ಸದಸ್ಯರು ಅಂಗನವಾಡಿ, ಆಶಾ, ಆರೋಗ್ಯ ಸೇರಿದಂತೆ ‌ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.