ಜ. 7,8: ಅಮಚೂರ್ ಕೋಡಿ ಕುಟುಂಬದಲ್ಲಿ ವಿಷ್ಣುಮೂರ್ತಿ, ದೈವಗಳ ನಡಾವಳಿ

0

ಅಮಚೂರ್ ಕೋಡಿ ಕುಟುಂಬಸ್ಥರ ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಶ್ರೀ ಕಂಚಿರಾಯ ದೈವದ ಪೂಜೆ, ಶ್ರೀ ಮಹಾವಿಷ್ಣುಮೂರ್ತಿ ಮತ್ತು ಧರ್ಮದೈವ,
ಉಪದೈವಗಳ ನಡಾವಳಿಗಳು ಜ. 7 ಮತ್ತು 8 ರಂದು ಮಡಿಕೇರಿ ತಾಲೂಕಿನ ಪೆರಾಜೆ ತರವಾಡು ಮನೆ ನಡೆಯಲಿದೆ.


ಜ. 07ರಂದು
ಬೆಳಿಗ್ಗೆ ಗಂಟೆ 10.00ಕ್ಕೆ ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಸಂಜೆ ಗಂಟೆ 3.00ಕ್ಕೆ ಕಂಚಿರಾಯ ದೈವದ ಪೂಜೆ
ರಾತ್ರಿ ದೈವಗಳ ನಡಾವಳಿಗೆ ಕೂಡುವುದು. ರಾತ್ರಿ ಗಂಟೆ 7.30ರಿಂದ ಗುರು ಕಾರ್ನೂರು, ದೇವತೆ, ವ್ಯಾಘ್ರ ಚಾಮುಂಡಿ, ವರ್ಣಾರ ಪಂಜುರ್ಲಿ, ಕೊರತ್ತಿ, ಸ್ಥಳ ಗುಳಿಗ, ಮಂತ್ರ ಗುಳಿಗ ಹಾಗೂ ಹೊರಗಿನ ಪಾಷಾಣ ಮೂರ್ತಿ ದೈವಗಳ ಕೋಲಗಳು ನಡೆಯಲಿದೆ.
ಜ. 8ರಂದು ಪೂರ್ವಾಹ್ನ ಗಂಟೆ 6.00ರಿಂದ ಪೊಟ್ಟ ದೈವ ಮತ್ತು ರಕೇಶ್ವರಿ ದೈವಗಳ ಕೋಲಗಳು
ಪೂರ್ವಾಹ್ನ ಗಂಟೆ 10.00ರಿಂದ ಶ್ರೀ ವಿಷ್ಣುಮೂರ್ತಿ, ರುದ್ರ ಚಾಮುಂಡಿ ಹಾಗೂ ಪಾಷಾಣ ಮೂರ್ತಿ
ದೈವಗಳ ಕೋಲಗಳು
ಮಧ್ಯಾಹ್ನ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದ್ದು, ಬಂಧು ಮಿತ್ರರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಸಮಿತಿಯ ಅಧ್ಯಕ್ಷ ವಾಸುದೇವ ಕೋಡಿ, ಕಾರ್ಯದರ್ಶಿ ಭಾಸ್ಕರ ಕೋಡಿ, ಕುಟುಂಬದ ಹಿರಿಯರಾದ ಕುಶಾಲಪ್ಪ ಕೋಡಿ ಆಮಂತ್ರಿಸಿದ್ದಾರೆ.